Skip to playerSkip to main content
  • 55 minutes ago
ಮೈಸೂರು : ಈ ಬಾರಿಯೂ ಐಪಿಎಲ್ ಫೈನಲ್ ತಲುಪಿರುವ RCB ಎರಡನೇ ಬಾರಿ ಗೆಲುವು ಸಾಧಿಸಲಿ ಎಂದು ಮೈಸೂರಿನ ದೇವರಾಜ ಮೊಹಲ್ಲಾದ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಹೋಮ ಹಾಗೂ ಪೂಜೆ ಸಲ್ಲಿಸಲಾಯಿತು. ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದು ನೋವಾಗಿದೆ: ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹರೀಶ್ ಗೌಡ, ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟಿರೋದು ನಮಗೆ ಬೇಸರ ಇದೆ, ಅತ್ಯುತ್ತಮ ನಾಯಕರಾಗಿ ಸುದೀರ್ಘವಾಗಿ ಆಡಳಿತ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ ಇದೆ. ಎಲ್ಲಾ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಂಡು ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಭೇದಭಾವ ಮಾಡದೇ  ಎಲ್ಲಾ ಶಾಸಕರಿಗೂ ಅನುದಾನ ಕೊಟ್ಟಿದ್ದಾರೆ ಎಂದರು. ಅತಿ ಹೆಚ್ಚು ಕಾಲ ಸಿಎಂ ಆಗಿ ಆಡಳಿತ ಕೊಟ್ಟು ದಾಖಲೆ ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರಲ್ಲಿ ಬಹುತೇಕ ಎಲ್ಲರೂ ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ. ಡಿ. ಕೆ. ಶಿವಕುಮಾರ್ ಅವರು ಸಿಎಂ ಆಗ್ತಿರೋದರಿಂದ ಖುಷಿಯಾಗಿದೆ, ನನಗೆ ಮೊದಲು ಬಿ ಫಾರಂ ಕೊಟ್ಟಿದ್ದು ಸಿದ್ದರಾಮಯ್ಯ ಅವರೇ, ಸಿದ್ದರಾಮಯ್ಯನವರೇ ನನ್ನ ರಾಜಕೀಯದ ಗುರುಗಳು, ಅವರೀಗ ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು. ಸಚಿವ ಸ್ಥಾನಕ್ಕೆ ಸಾಕಷ್ಟು ನಾಯಕರು ಆಕಾಂಕ್ಷಿಯಾಗಿದ್ದಾರೆ, ನಾನು ಯಾವುದೇ ರೀತಿಯ ಆಕಾಂಕ್ಷಿಯಲ್ಲ, ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೆಲಸ ನಿರ್ವಹಿಸುತ್ತೇವೆ. ಸಿದ್ದರಾಮಯ್ಯ ಅವರ ರೀತಿಯೇ ಡಿ. ಕೆ. ಶಿವಕುಮಾರ್ ಅವರು ‌ಕೂಡ ಆಡಳಿತ ಮಾಡುತ್ತಾರೆ ಎಂದರು.ಇದನ್ನೂ ಓದಿ :  ಸತತ 2ನೇ ಬಾರಿಗೆ ಐಪಿಎಲ್ ಫೈನಲ್‌ ತಲುಪಿದ ಆರ್‌ಸಿಬಿ: ಫ್ಯಾನ್ಸ್​ಗೆ ಸುರಕ್ಷತಾ ಮಾರ್ಗಸೂಚಿ ಪ್ರಕಟಿಸಿದ ಬೆಂಗಳೂರು ಪೊಲೀಸರು

Category

🗞
News
Transcript
00:00RCA! RCA! RCA! RCA! RCA! RCA!
00:30RCA! RCA! RCA!
01:05RCA! RCA! RCA! RCA!
01:33RCA! RCA!
01:39RCA! RCA!
01:42RCA!
01:44RCA!
Comments

Recommended