Skip to playerSkip to main content
  • 6 hours ago
ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿ ಕರಡಿಯೊಂದು ರಸ್ತೆಯಲ್ಲಿ ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಗಳವಾರ ಬೆಳಗಿನ ಜಾವ ನಗರದ ಶಂಕರಪುರ, ಎಂ.ಜಿ.ರಸ್ತೆ ಮತ್ತು ಗುರುನಾಥ ಮಾರ್ಗವಾಗಿ ಮಿಲನ್ ಥಿಯೇಟರ್‌ವರೆಗೆ ಕರಡಿ ರಾಜಾರೋಷವಾಗಿ ಸಂಚರಿಸಿದೆ.ಮಂಜು ಮುಸುಕಿದ ಮುಂಜಾನೆ ಕರಡಿ ಕಂಡ ಸ್ಥಳೀಯ ಬೈಕ್ ಸವಾರರೊಬ್ಬರು ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದ ಸಮೀಪ ಯುವಕ ಕರಡಿಯನ್ನು ಅಟ್ಟಾಡಿಸಿಕೊಂಡು ಹಿಂದೆಯೇ ಓಡಿದ್ದು, ಮಿಲನ್ ಥಿಯೇಟರ್ ಬಳಿ ಕತ್ತಲಿನಲ್ಲಿ ಕಣ್ಮರೆಯಾಗಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಕರಡಿಯನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಸ್ಥಳಾಂತರಿಸುವ ಮೂಲಕ ನಾಗರಿಕರ ಆತಂಕ ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಕುರಿತು ಪರಿಸರ ತಜ್ಞ ಭರತ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಏಕೆ ಬರುತ್ತಿವೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ. ಚಿಕ್ಕಮಗಳೂರು ನಗರದಲ್ಲೇ ಕರಡಿ ಓಡಾಡಿರುವುದು ಆಶ್ಚರ್ಯ ತಂದಿದೆ. ಈ ಕರಡಿ ದಾರಿ ತಪ್ಪಿ ಬಂದಿರಬಹುದು. ಮೊನ್ನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಕರಡಿ ಸಂಚರಿಸಿತ್ತು. ಕಾಡುಪ್ರಾಣಿಗಳು ನಗರ ಪ್ರವೇಶ ಮಾಡುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆಗಟ್ಟಬೇಕು" ಎಂದು ಒತ್ತಾಯಿಸಿದರು.ಇವುಗಳನ್ನೂ ಓದಿ: ಮೂಡಿಗೆರೆ ತಾಲೂಕಿಗೆ ಬಂದ 45 ಕಾಡಾನೆಗಳು: ಭೀಮನ ನಾಯಕತ್ವದಲ್ಲಿ ತೋಟ ಗದ್ದೆಗಳಿಗೆ ನುಗ್ಗುತ್ತಿರುವ ಗಜರಾಜ ಪಡೆಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ವಿಡಿಯೋ

Category

🗞
News
Transcript
00:00Oh
00:48I don't know.
01:02I don't know.
01:35I don't know.
01:42I don't know.
Comments

Recommended