Skip to playerSkip to main content
  • 18 minutes ago
ಚಾಮರಾಜನಗರ: ಗ್ರಾಮದ ಸಮೀಪ ಲಘು ವಿಮಾನ ಹಾರಾಟ ನಡೆಸುತ್ತಿದ್ದು, ಜಿಲ್ಲೆಯ ಹನೂರು ತಾಲೂಕಿನ ಹಾವಿನ ಮೂಲೆಯ ಜನರಲ್ಲಿ ಆತಂಕ ಮನೆಮಾಡಿದೆ.ಹಾವಿನಮೂಲೆ ಎಂಬ ಕಾಡಂಚಿನ ಗ್ರಾಮ ಬಿಳಿಗಿರಿರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯಕ್ಕೆ ಒಳಪಡುತ್ತಿದ್ದು, ಜನವಸತಿ ಪ್ರದೇಶದ ತೀರಾ ಸಮೀಪವೇ ಲಘು ವಿಮಾನ ಹಾರಾಟ ನಡೆಸುತ್ತಿದೆ.ಕಳೆದ 3-4 ದಿನಗಳಿಂದಲೂ ಸುತ್ತಮುತ್ತ ಲಘು ವಿಮಾನ ಹಾರಾಟ ನಡೆಸುತ್ತಿದೆ. ಕಿವಿಗಡಚಿಕ್ಕುವ ಶಬ್ದ ಬರುತ್ತಿದೆ. ಯಾವ ಕಾರಣಕ್ಕೆ ವಿಮಾನ ಹಾರಾಟ ನಡೆಸಲಾಗುತ್ತಿದೆ ಎಂಬುದು ತಿಳಿದುಬಂದಿಲ್ಲ. ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು ಎಂದು ಗ್ರಾಮದ ಮುಖಂಡ ಮಹಾದೇವ ಮನವಿ ಮಾಡಿದರು.ಲಘು ವಿಮಾನದ ಹಾರಾಟದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಘು ವಿಮಾನವನ್ನು ಯಾರಾದರೂ‌‌ ಖಾಸಗಿಯಾಗಿ ತರಿಸಿಕೊಂಡು ಹಾರಾಟಕ್ಕೆ ಬಳಸಿದ್ದಾರಾ ಅಥವಾ ವಾಯುಸೇನೆ ತರಬೇತಿ ಹಾರಾಟ ನಡೆಸುತ್ತಿದೆಯೇ ಎಂಬುದು ಗೊತ್ತಾಗಿಲ್ಲ. ಸ್ಥಳೀಯರು ಕಳೆದ ಮೂರು ದಿನಗಳಿಂದ ವಿಮಾನಗಳು ಹಾರಾಟ ನಡೆಸುತ್ತಿವೆ ಎನ್ನುತ್ತಿದ್ದು, ಜಿಲ್ಲಾಡಳಿತ ಪರಿಶೀಲನೆ ನಡೆಸಿ ಜನರ ಆತಂಕ, ಅನುಮಾನಗಳನ್ನು ದೂರ ಮಾಡಬೇಕಿದೆ.ಇದನ್ನೂ ನೋಡಿ: ರನ್‌ವೇನಲ್ಲಿ ಸಿಲುಕಿದ ವಾಯುಪಡೆ ಯುದ್ಧ ವಿಮಾನ ತೆರವು: ಪುಣೆ ವಿಮಾನ ನಿಲ್ದಾಣದಲ್ಲಿ ಸಂಚಾರ ಪುನಾರಂಭ

Category

🗞
News
Transcript
00:17To be continued...
00:30To be continued...
01:00To be continued...
Comments

Recommended