Skip to playerSkip to main content
  • 15 hours ago
ಮೈಸೂರು: ನಗರದ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡಿದ್ದ, ಹಾರುವ ಹಾವನ್ನು ಉರಗ ರಕ್ಷಕ ಸ್ನೇಕ್​ ಶ್ಯಾಮ್​​ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.ವಿಜಯನಗರ ಮೊದಲನೇ ಹಂತದ ನಿವೃತ್ತ ನೌಕರ ಗಂಗಾಧರಪ್ಪ ಅವರ ಅಡುಗೆ ಮನೆಯ ದಿನಸಿ ಡಬ್ಬದ ಹಿಂಭಾಗ ಶುಕ್ರವಾರ ಹಾವು ಕಾಣಿಸಿಕೊಂಡಿತ್ತು. ತಕ್ಷಣ ಮನೆ ಮಾಲೀಕರು ಉರಗ ರಕ್ಷಕ ಸ್ನೇಕ್​ ಶ್ಯಾಮ್​ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಶಾಮ್ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಮಂಗಳೂರು ಭಾಗದಲ್ಲಿ ಹೆಚ್ಚಾಗಿ ಕಾಣುವ ಹಾವು: ಇದು ಅಪರೂಪದ ಹಾರುವ ಹಾವಾಗಿದ್ದು, ವಿಷ ಇರುವುದಿಲ್ಲ. ಹೆಚ್ಚಾಗಿ ಮಂಗಳೂರು ಭಾಗದಲ್ಲಿ ಕಂಡುಬರುತ್ತದೆ. ಮೈಸೂರು ಭಾಗದಲ್ಲಿ ಕಂಡಿರುವುದು ಅಪರೂಪ ಎಂದು ಉರಗ ರಕ್ಷಕ  ಹೇಳಿದ್ದಾರೆ. ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ತಾಪ ತಾಳಲಾರದೆ ಹಾವುಗಳು ತಣ್ಣನೆಯ ಜಾಗವನ್ನು ಹುಡುಕಿಕೊಂಡು ಬರುತ್ತವೆ. ಕೆರೆ-ಕಟ್ಟೆಗಳ ಸಮೀಪ, ಕಾಡಂಚಿನ, ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.ಇದನ್ನೂ ಓದಿ: ರಾಂಚಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ: ವಿಡಿಯೋ

Category

🗞
News
Comments

Recommended