ಚಿಕ್ಕಮಗಳೂರು: ಬಯಲು ಸೀಮೆಯ ಬೆಂಕಿ ರಂಗನಾಥನ ಅದ್ಧೂರಿ ಜಾತ್ರೆ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು, ಸಾವಿರಾರು ಜನರು ಕಣ್ತುಂಬಿಕೊಂಡರು.ಬೆಂಕಿ ರಂಗನಾಥ ಸ್ವಾಮಿ ನೋಡಲು ದೂರದ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಬೆಂಕಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವವು ಯುಗಾದಿ ಹಬ್ಬ ಮುಗಿದು ಕೆಲವೇ ದಿನಗಳಲ್ಲಿ ಈ ಪದ್ಧತಿ ಅನಾದಿ ಕಾಲದಿಂದಲೂ ಹಿರಿಯರು ನಡೆಸಿಕೊಂಡು ಬಂದಿದ್ದಾರೆ. ಜಾತ್ರೆಯಲ್ಲಿ ಇಡೀ ಊರಿಗೆ ಸಾರು ಹಾಕುವ ಆಚರಣೆಯೂ ಇದೆ. ಸಾರು ಹಾಕಿದ ನಂತರದಲ್ಲಿ ಊರಿನ ತುಂಬಾ ಮಾಂಸಾಹಾರ ನಿಷಿದ್ಧ. ಜತೆಗೆ ಊರಿನ ಯಾರೊಬ್ಬರೂ ಕೂಡ ಹೊರಗಡೆ ಮಾಂಸಾಹಾರ ತಿಂದು ಊರಿನ ಒಳಗಡೆ ಪ್ರವೇಶ ಮಾಡುವಂತಿಲ್ಲ.ಈ ಜಾತ್ರೆ ಹಾಗೂ ರಥೋತ್ಸವದ ಕುರಿತು ಗ್ರಾಮದ ಭಕ್ತರಾದ ಅಶೋಕ್ ಅವರು ಮಾತನಾಡಿ, ನಾವು ಚಿಕ್ಕ ವಯಸ್ಸಿನಿಂದಲೂ ಈ ಜಾತ್ರೆಯನ್ನು ನೋಡುತ್ತಾ ಇದ್ದೇವೆ. ಬೆಂಕಿ ರಂಗನಾಥ ಅಂದರೆ ನಮ್ಮಲ್ಲಿ ಭಯ ಮೂಡುತ್ತದೆ. ತಪ್ಪು ಮಾಡಿದರೆ ದೇವರು ಶಿಕ್ಷಸುತ್ತಾನೆ ಎಂಬ ನಂಬಿಕೆ ಇದೆ. ಈ ಜಾತ್ರೆ ಒಟ್ಟು 3 ದಿನಗಳ ಕಾಲ ಜರುಗುತ್ತದೆ. ಗರುಡೋತ್ಸವ ಈ ಜಾತ್ರೆಯ ವಿಶೇಷ. ಮುಂಚೆ ಹಳೆಯ ರಥ ಇತ್ತು, ಈಗ ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರಥವನ್ನು ಮಾಡಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ: ಚಲುವನಾರಾಯಣಸ್ವಾಮಿ ಕಣ್ತುಂಬಿಕೊಂಡ ಭಕ್ತಗಣ
Comments