ರಾಯಚೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಹೋಟೆಲ್ಗೆ ನುಗ್ಗಿದ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹೊರವಲಯದ ಪಟ್ಟಣದ ಮಾತಾ ಮಾಣಿಕೇಶ್ವರಿ ದೇಗುಲದ ಬಳಿ ಬುಧವಾರ ನಡೆದಿದೆ. ಕಲಬುರಗಿ - ಲಿಂಗಸೂಗೂರು ಹೆದ್ದಾರಿ ಪಕ್ಕದ ವೀರೇಶ್ ಹೋಟೆಲ್ಗೆ ಕಾರು ನುಗ್ಗಿದೆ. ಈ ವೇಳೆ ಹೋಟೆಲ್ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.ಆದನಗೌಡ ಬುಂಕಲದೊಡ್ಡಿ ಎಂಬವರಿಗೆ ಸೇರಿದ ಕಾರು ಇದಾಗಿದೆ. ಕಲಬುರಗಿಯಿಂದ ಲಿಂಗಸಗೂರಿಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯಿಂದ ಹೋಟೆಲ್ನಲ್ಲಿನ ಕೆಲ ಸಾಮಗ್ರಿಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಆಗಮಿಸಿ, ಪರಿಶೀಲನೆ ಕೈಗೊಂಡರು.ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪಲ್ಟಿಯಾಗಿ ನಿಂತಿದ್ದ ಕಾರನ್ನು ನೋಡಲು ಜನರು ಮುಗಿಬಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಎಲ್ಲರಿಗೂ ಸಮಾಧಾನ ತಂದಿತು. ಕಾರ್ಯಕ್ರಮದ ನಿಮಿತ್ತ ಹೋಟೇಲ್ ಅನ್ನು ಬಂದ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಇವುಗಳನ್ನೂ ಓದಿ: ಮಂಗಳೂರು: ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಗುದ್ದಿದ ಬೈಕ್, ಕಂಬ ತುಂಡು- ವಿಡಿಯೋಹಾಸನ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್; ಕೂದಲೆಳೆ ಅಂತರದಲ್ಲಿ ಅವಘಡದಿಂದ ಪಾರಾದ ವಿದ್ಯಾರ್ಥಿಗಳು
Comments