Skip to playerSkip to main content
  • 21 minutes ago
ಚಿಕ್ಕಮಗಳೂರು : ಬೇಸಿಗೆ ಬಂದ್ರೆ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಕೂಲ್ ಕೂಲ್ ವಾತಾವರಣದಲ್ಲಿ ದಿನ ಕಳೆದು ಹೋಗ್ತಾರೆ. ಆದ್ರೆ ಈ ಬಾರಿ ಕೂಲ್ ಕೂಲ್ ವಾತಾವರಣ ಬದಲಾಗಿದೆ. ಕೆಂಡದಂತಹ ಬಿಸಿಲಿನಿಂದಾಗಿ ಮನೆಯೊಳಗಿದ್ದವರೂ ಸಹ ಬೆವರುತ್ತಿದ್ದಾರೆ.  ಚಿಕ್ಕಮಗಳೂರಿನಲ್ಲಿ ಬಿಸಿಲಿನ ಧಗೆ ಗರಿಷ್ಠ ಮಟ್ಟವನ್ನು ದಾಟಿದೆ. ಬಿಸಿಲ ಬೇಗೆಗೆ ಕಾಫಿನಾಡಿನ ಜನರು ಬಳಲಿ ಬೆಂಡ್ ಆಗಿದ್ದಾರೆ. ಇಲ್ಲಿನ ವಾತಾವರಣ ಗರಿಷ್ಠ ಅಂದ್ರೆ ಈವರೆಗೆ 28 ಡಿಗ್ರಿ ಸೆಲ್ಸಿಯಸ್, ತಪ್ಪಿದ್ರೆ 29 ಇರ್ತಾ ಇತ್ತು. ಆದ್ರೆ ಈ ಬಾರಿ ಹವಾಮಾನ ಬದಲಾವಣೆಯಿಂದ ಬಿಸಿಲ ಬೇಗೆಯಲ್ಲಿ ಜನ ಬೇಯುವಂತಾಗಿದೆ. ಕನಿಷ್ಠ 29 ಡಿಗ್ರಿ ಇರ್ತಾ ಇದ್ದ ವಾತಾವರಣ 32, 33, 34 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗಿದೆ.ಸುಡು ಬಿಸಿಲಿನಿಂದಾಗಿ ಜನ ಮನೆಯಿಂದ ಹೊರಕ್ಕೆ ಕಾಲಿಡಲೂ ಭಯ ಪಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಜನರು ಫ್ಯಾನ್, ಎಸಿ ಇಲ್ಲದೇ ಮಲೆನಾಡಲ್ಲೂ ದಿನ ಕಳೆಯುವುದು ಕಷ್ಟವಾಗಿದೆ.ಬೇಸಿಗೆಗಾಲ ಬಂದ್ರೆ ಆಗೊಮ್ಮೆ, ಇಗೊಮ್ಮೆ ನಡು ನಡುವಲ್ಲಿ ಕೊಂಚ ಮಳೆಯಾಗ್ತಾ ಇತ್ತು. ಹೀಗೆ ಸುರಿಯುವ ಹೂ ಮಳೆ ಹವಾಮಾನವನ್ನು ತಂಪಾಗಿಡುತ್ತಿತ್ತು. ಆದ್ರೆ ಈ ಬಾರಿ ಕೆಲವು ಕಡೆ ಮಾತ್ರ ಮಳೆಯಾಗಿರುವುದರಿಂದಾಗಿ ನೆಲದ ಕಾವು ಹೆಚ್ಚಾಗಿದೆ. ಸೆಕೆಯ‌ನ್ನು ತಾಳಲಾರದೆ ಜನ ಮನೆಯಿಂದ ಹೊರಬರಲು ಛತ್ರಿ, ಹ್ಯಾಂಡ್ ಫ್ಯಾನ್ ಬಳಸುತ್ತಿದ್ದಾರೆ. ಈ ಕುರಿತು ಸ್ಥಳೀಯರಾದ ರಾಜೇಶ್ ಅವರು ಮಾತನಾಡಿ, 'ಬಿಸಿಲಿನಿಂದಾಗಿ ಜನಸಾಮಾನ್ಯರು ಸೇರಿದಂತೆ, ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳದಂತಾಗಿದೆ. ಬಿಸಿಲಿನಿಂದಾಗಿ ಮಕ್ಕಳು ಹಾಗೂ ವಯೋವೃದ್ಧರ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಾಣಿ -ಪಕ್ಷಿಗಳಿಗೂ ನೀರಿನ ಅಭಾವ ಹೆಚ್ಚಳವಾಗಲಿದೆ' ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ :  ಬಿಸಿಲೇಟಿಗೆ ಜನ ತತ್ತರ: ಹಾವೇರಿಯಲ್ಲಿ ಈಜುಕೊಳಗಳತ್ತ ಮಕ್ಕಳು, ಯುವಕರ ದಾಂಗುಡಿ

Category

🗞
News
Comments

Recommended