ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಚಿತ್ರ ನಟ ಸುದೀಪ್ ಭೇಟಿ ನೀಡಿ, ದೇವರ ದರ್ಶನ ಪಡೆದರು. ನೆಚ್ಚಿನ ನಟ ದೇವಸ್ಥಾನಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದು ಅವರ ಅಭಿಮಾನಿಗಳು, ದೇವಸ್ಥಾನದ ಮುಂಭಾಗ ಜಮಾಯಿಸಿದ್ದರು. ಕೂಡಲೇ ಅಲರ್ಟ್ ಆದ ಪೊಲೀಸರು, ಸುದೀಪ್ ಹಾಗೂ ಅವರ ಜೊತೆಯಲ್ಲಿದ್ದವರನ್ನು ದೇವಸ್ಥಾನದ ಒಳಗೆ ಹೋಗಲು ಅನುವು ಮಾಡಿಕೊಟ್ಟರು. ಈ ವೇಳೆ ದೇವಸ್ಥಾನದ ಒಳಗೂ ಸೆಲ್ಫಿ ಹಾಗೂ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಚಾಮುಂಡೇಶ್ವರಿ ದೇವಸ್ಥಾನದಿಂದ ಹೊರಗೆ ಹೋಗುವವರೆಗೂ, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬಿಗ್ ಬಾಸ್ ಮುಗಿದ ನಂತರ ಬಿಡುವಿನಲ್ಲಿರುವ ಸುದೀಪ್ ಚಾಮುಂಡೇಶ್ವರಿ ದರ್ಶನ ಪಡೆದು ತೆರಳಿದರು.ಚಿತ್ರರಂಗಕ್ಕೆ ಬಂದು 30 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪೋಸ್ಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಈ ಸುಂದರ ಹಾಗೂ ಅದ್ಭುತವಾದ ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿ ಇಂದು ನಿಮ್ಮ ಮುಂದೆ ನಿಂತಿರುವಾಗ ನನ್ನ ಮನಸ್ಸು ಭಾವುಕತೆಯಿಂದ ತುಂಬಿದೆ. ಕನಸುಗಳು, ಆತಂಕಗಳು ಮತ್ತು ಅಚಲವಾದ ಭರವಸೆಯೊಂದಿಗೆ ಅಂದು ಕಾಲಿಟ್ಟ ಸಣ್ಣ ಹುಡುಗನ ಬದುಕು ಇಂದು ಇಷ್ಟು ಎತ್ತರಕ್ಕೆ ಬೆಳದಿರುವುದಕ್ಕೆ ಕಾರಣ ನೀವು. ನೀವೇ ನನ್ನ ಶಕ್ತಿ, ನಿಮ್ಮ ಪ್ರೀತಿಯೇ ನನಗೆ ಮುಂದೆ ಸಾಗುವ ಧೈರ್ಯ ಕೊಡುತ್ತದೆ. ನಾನು ಕಾಣಿಸಿಕೊಳ್ಳಲು ಅಭಿಮಾನಿಗಳೇ ಕಾರಣ. ನಿಮ್ಮ ಕಥೆಗಳಲ್ಲಿ ನನ್ನನ್ನು ನಂಬಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿ ನನ್ನೊಳಗಿನ ಕಲಾವಿದನನ್ನು ಹೊರತಂದಿದ್ದಕ್ಕಾಗಿ ಧನ್ಯವಾದಗಳು. ಕನಸುಗಳನ್ನು ನನಸು ಮಾಡುವ ನಿಮ್ಮ ಧೈರ್ಯ ಮತ್ತು ನಂಬಿಕೆಗೆ ನಾನು ಸದಾ ಋಣಿ ಎಂದೆಲ್ಲ ಬರೆದುಕೊಂಡಿದ್ದರು.ಇದನ್ನೂ ಓದಿ: ಸುದೀಪ್ 30 ವರ್ಷ ಸುದೀರ್ಘ ಪಯಣ:"ಪ್ರತಿ ಯಶಸ್ಸು ಇಲ್ಲಿ ಸಾಲವಷ್ಟೇ"- ಅಭಿನಯ ಚಕ್ರವರ್ತಿಯ ಅನಂತ ಕೃತಜ್ಞತೆ
Comments