Skip to playerSkip to main content
  • 2 days ago
ಸುಳ್ಯ (ದ.ಕನ್ನಡ): ಸುಳ್ಯದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ ಬಾವಿಗೆ ಬಿದ್ದ ಕಾಡಾನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.ಮೇಲೆದ್ದ ಕಾಡಾನೆ ಜನವಸತಿ ಪ್ರದೇಶದತ್ತ ದೌಡಾಯಿಸಿದೆ. ನಿನ್ನೆ ರಾತ್ರಿ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ ಪ್ರಜ್ವಲ್ ಎಂಬವರ ಬಾವಿಗೆ ಕಾಡಾನೆ ಬಿದ್ದಿತ್ತು. ವಿಷಯ ತಿಳಿದು ಅರಣ್ಯ ಇಲಾಖೆಯವರು ರಾತ್ರಿಯೇ ದೌಡಾಯಿಸಿದರು. ಬೆಳಗ್ಗೆ 8 ಗಂಟೆಗೆ ಹಿಟಾಚಿ ತಂದು ಕಣಿವೆ ತೋಡಲಾಯಿತು. ಮಧ್ಯಾಹ್ನ 12.50ರ ವೇಳೆಗೆ ಆನೆ ಬಾವಿಯಿಂದ ಮೇಲೆದ್ದು ಜನ ವಸತಿ ಪ್ರದೇಶದತ್ತ ದೌಡಾಯಿಸಿತು. ಆನೆಯ ಮುಂದಿನ ಚಲನೆಯ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಲಿದೆ. ಆನೆ ಬಾವಿಗೆ ಬಿದ್ದ ಸುದ್ದಿ ತಿಳಿದು ಜನರು ಗುಂಪು ಗುಂಪಾಗಿ ಬರತೊಡಗಿದರು. ಅರಣ್ಯ, ಪೋಲಿಸ್ ಇಲಾಖೆ ಬೇಕಾದ ಸುರಕ್ಷತಾ ಕ್ರಮ ಕೈಗೊಂಡಿತ್ತು. ಹಿಟಾಚಿಯನ್ನು ಲಕ್ಷ್ಮೀ ಪ್ರಸಾದ್​ ತೊಡಿಕಾನ, ತೇಜಸ್ ಚೆಮ್ನೂರು ಅವರು ಆಪರೇಟ್ ಮಾಡಿ ಕಣಿವೆ ತೋಡಿ ಆನೆಯನ್ನು ಮೇಲೆ ಬರಲು ಸಹಕರಿಸಿದರು.ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್ ಒ ಆಂಥೋನಿ ಎಸ್. ಮರಿಯಪ್ಪ, ಎಸಿಎಫ್​ಗಳಾದ ಪ್ರಶಾಂತ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ರೇಂಜರ್​ಗಳಾದ ಕಿರಣ್ ಪುತ್ತೂರು, ವಿಮಲ್ ಬಾಬು ಹಾಗೂ ಸಿಬ್ಬಂದಿಗಳು ಪೋಲೀಸ್ ಇಲಾಖೆಯವರು, ಅಗ್ನಿ ಶಾಮಕ ಇಲಾಖೆಯವರು‌ ಸಹಕರಿಸಿದ್ದರು.ಇದನ್ನೂ ಓದಿ: ದಕ್ಷಿಣ ಕನ್ನಡ: ಕಡಬ ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಪತ್ತೆ, ಸಾರ್ವಜನಿಕರಿಗೆ ಎಚ್ಚರಿಕೆ

Category

🗞
News
Transcript
00:27For more information visit www.fema.gov
Comments

Recommended