Skip to playerSkip to main content
  • 2 weeks ago
ದಾವಣಗೆರೆ: ರೈಸ್ ಮಿಲ್​ಗಳಲ್ಲಿ ಕಾಣಿಸಿಕೊಂಡ ಎರಡು ಹಾವುಗಳನ್ನು ಕಂಡು ಕಾರ್ಮಿಕರು ಭಯಭೀತರಾದ ಘಟನೆ ನಗರದ ಮಟ್ಟಿಕಲ್ ಹಾಗೂ ಅಣ್ಣ ನಗರದ ರೈಸ್ ಮಿಲ್​​ಗಳಲ್ಲಿ ನಡೆದಿದೆ. ಈ ಎರಡು ಹಾವುಗಳನ್ನು ಸ್ನೇಕ್ ಬಸವರಾಜ್​ ಅವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.   ಅಣ್ಣ ನಗರದಲ್ಲಿರುವ ರೈಸ್ ಮಿಲ್​ಗೆ 7 ಅಡಿ ಉದ್ದದ ಒಂದು ಕೆರೆಹಾವು ಬಂದಿತ್ತು. ಇನ್ನೊಂದೆಡೆ ನಗರದ ಮಟ್ಟಿಕಲ್​​ನಲ್ಲಿರುವ ದಾವಣಗೆರೆ ಉಸ್ತುವಾರಿ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್ ಅವರ ಒಡೆತನದ ಕಲ್ಲೇಶ್ವರ ರೈಸ್ ಮಿಲ್ ಗೆ ಐದು ಅಡಿ ಉದ್ದದ ಗೋದಿ ಬಣ್ಣದ ನಾಗರಹಾವು ಆಗಮಿಸಿತ್ತು.‌ ವಿಷಯ ತಿಳಿಯುತ್ತಿದ್ದಂತೆ ಸ್ನೇಕ್ ಬಸವರಾಜ್ ಅವರು ಸ್ಥಳಕ್ಕೆ ಬಂದು ಅವುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಸ್ನೇಕ್ ಬಸವರಾಜ್ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, 'ಅಣ್ಣ ನಗರದ ರೈಸ್ ಮಿಲ್​​ವೊಂದರಲ್ಲಿ ಏಳು ಅಡಿ ಉದ್ದದ ಕೆರೆ ಹಾವು ರಕ್ಷಣೆ ಮಾಡಿದ್ದೇನೆ. ಮತ್ತೊಂದೆಡೆ ಸಚಿವರಾದಂತಹ ಎಸ್. ಎಸ್​ ಮಲ್ಲಿಕಾರ್ಜುನ್ ಅವರ ಕಲ್ಲೇಶ್ವರ ರೈಸ್‌ ಮಿಲ್​​ನಲ್ಲಿ ಐದು ಅಡಿ ಉದ್ದದ ನಾಗರಹಾವು ರಕ್ಷಣೆ ಮಾಡಿದ್ದೇನೆ. ಕೆರೆ ಹಾವು ಬೃಹತ್ ಆಕಾರವಾಗಿದೆ. ಬರೋಬ್ಬರಿ ಏಳು ಅಡಿ ಹಾವು ಇದ್ದು, ರಕ್ಷಣೆ ಮಾಡಲು ಹರಸಾಹಸ ಪಡಬೇಕಾಯಿತು. ಸದ್ಯ ಎರಡೂ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದೇನೆ' ಎಂದು ತಿಳಿಸಿದ್ದಾರೆ. 

Category

🗞
News
Transcript
00:00This is a production of the U.S. Department of Education, Department of Education, and Department of Education.
Be the first to comment
Add your comment

Recommended