Skip to playerSkip to main content
  • 20 hours ago
ಚಾಮರಾಜನಗರ: ದೇವಾಲಯ ಉದ್ಘಾಟನೆಗೊಂಡ ಸಂಭ್ರಮ ಮುಗಿಯುತ್ತಿದ್ದಂತೆ ಖದೀಮರು ಲಕ್ಷಾಂತರ ಮೌಲ್ಯದ ಬೆಳ್ಳಿ, ಚಿನ್ನಾಭರಣ ದೋಚಿದ ಘಟನೆ ಬುಧವಾರ ತಡರಾತ್ರಿ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿದೆ.ಬರಗಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕನ್ನ ಹಾಕಿರುವ ಖದೀಮರು ದೇವರ ಬೆಳ್ಳಿ ವಿಗ್ರಹ, ಚಿನ್ನಾಭರಣ, ಸಿಸಿಟಿವಿ ಹಾರ್ಡ್​ಡಿಸ್ಕ್​​ ಕೂಡ ಕದ್ದೊಯ್ದಿದ್ದಾರೆ. ಕಳೆದ 8, 9 ಹಾಗೂ 10 ರಂದು ನೂತನ ಶ್ರೀ ಬಸವೇಶ್ವರ ದೇಗುಲ ಹಾಗೂ ಮಾರಮ್ಮನ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಗಿತ್ತು. ದೇವರ ವಿಗ್ರಹ ಹಾಗೂ ಚಿನ್ನಾಭರಣ ಇರುವ ಮಾಹಿತಿ ಅರಿತ ಕಳ್ಳರು ದೇವಾಲಯದ ಬಾಗಿಲು ಮುರಿದು ‌ಒಳನುಗ್ಗಿ ಮಹಾ ಪಾರ್ವತಿ ಬೆಳ್ಳಿ ‌ವಿಗ್ರಹ‌, ಎರಡು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನದ ತಾಳಿ, ಓಲೆ, ಜುಮುಕಿ‌ ಹಾಗೂ ಐದು ಕೆಜಿಯಷ್ಟು ಬೆಳ್ಳಿಯನ್ನು ಕಳ್ಳತನ ಮಾಡಿದ್ದಾರೆ. ಹಾಗೇ ಲಾಕರ್‌ನಲ್ಲಿದ್ದ ಮತ್ತಷ್ಟು ಚಿನ್ನಾಭರಣ ಕದಿಯಲು ವಿಫಲ ಯತ್ನ ನಡೆದಿದೆ.ಗುಂಡ್ಲುಪೇಟೆ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್ ಜಯಕುಮಾರ್, ಸಬ್ಸ್​ ಇನ್ಸ್​ಪೆಕ್ಟರ್​ ನರೇಶ್​ ಕುಮಾರ್​ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕೂಡ ಮಾಹಿತಿ ಕಲೆ ಹಾಕಿ ತನಿಖೆ ಆರಂಭಿಸಿದ್ದಾರೆ‌. ಇದನ್ನೂ ಓದಿ: ತುಮಕೂರು: ಇತಿಹಾಸ ಪ್ರಸಿದ್ಧ ವಡ್ಡಗೆರೆ ವೀರನಾಗಮ್ಮ ದೇವಸ್ಥಾನದಲ್ಲಿ ಕಳ್ಳತನ 

Category

🗞
News
Transcript
00:00Oh
00:35There are a lot of people out there.
00:37There are people out there around me.
00:49They are living in the house.
00:53They're living in the house.
00:58Oh, my God.
Comments

Recommended