Skip to playerSkip to main content
  • 6 hours ago
ದಕ್ಷಿಣ ಕನ್ನಡ: ಉಳ್ಳಾಲ ಸಮುದ್ರ ತೀರದಲ್ಲಿ ಶುಕ್ರವಾರ ಬೆಳಗ್ಗೆ ಅಪರೂಪದ ಘಟನೆಯೊಂದು ನಡೆದಿದ್ದು, ರಾಶಿ ರಾಶಿಯಾಗಿ ಬೂತಾಯಿ ಮೀನುಗಳು ತೀರಕ್ಕೆ ಅಪ್ಪಳಿಸಿವೆ. ಈ ದೃಶ್ಯ ಕಂಡ ಸ್ಥಳೀಯರು ಹಾಗೂ ಮೀನುಗಾರರು ತಕ್ಷಣ ಸಮುದ್ರ ತೀರದತ್ತ ಧಾವಿಸಿ ಮೀನುಗಳನ್ನು ಸಂಗ್ರಹಿಸಿದರು.ಬೆಳಗ್ಗೆ ಸುಮಾರು 11.30ರ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ತೀರಕ್ಕೆ ತೇಲಿ ಬಂದವು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಮೀನುಗಾರರು ಬಲೆ, ಬುಟ್ಟಿಗಳು ಮತ್ತು ಗೋಣಿಚೀಲಗಳ ಸಹಾಯದಿಂದ ಮೀನುಗಳನ್ನು ಸಂಗ್ರಹಿಸಿಕೊಂಡರು.ಸ್ಥಳೀಯರ ಮಾಹಿತಿ ಪ್ರಕಾರ, ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯಾಂತ್ರಿಕ ನಾಡದೋಣಿಗಳ ಬಲೆಗೆ ಸಿಲುಕಿದ್ದ ಬೂತಾಯಿ ಮೀನುಗಳನ್ನು ಬಲೆ ಹಾನಿಯಾಗಿದ್ದ ಕಾರಣ ಸಮುದ್ರಕ್ಕೆ ಹೊರಹಾಕಿರಬಹುದು. ನಂತರ ಅವು ಅಲೆಗಳ ಹೊಡೆತಕ್ಕೆ ಸಿಲುಕಿ ಉಳ್ಳಾಲ ಸಮುದ್ರ ತೀರಕ್ಕೆ ತೇಲಿ ಬಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.ಮೀನುಗಾರರ ಪ್ರಕಾರ, ಬೂತಾಯಿ ಮೀನು ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡುಬರುವ ಜಾತಿಯಾಗಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಮುದ್ರ ತೀರಕ್ಕೆ ಬರುವುದು ಅಪರೂಪದ ಬೆಳವಣಿಗೆಯಾಗಿದೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಅನಿರೀಕ್ಷಿತವಾಗಿ ಹೆಚ್ಚಿನ ಪ್ರಮಾಣದ ಮೀನು ದೊರೆತ ಹಿನ್ನೆಲೆಯಲ್ಲಿ ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಕೇವಲ 8 ನಿಮಿಷಗಳಲ್ಲಿ ರಿವರ್ಸ್ ಸ್ಪೀಡ್ ಪೇಂಟಿಂಗ್ ಮೂಲಕ ಶ್ರೀ ಜಗನ್ನಾಥನ ಭವ್ಯ ಚಿತ್ರ ರಚನೆ

Category

🗞
News
Transcript
00:00I love you
Comments

Recommended