Skip to playerSkip to main content
  • 5 weeks ago
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯ ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ ಬಿತ್ತು. ಮೂರು ದೇವರನ್ನು ಮೂರು ರಥದಲ್ಲಿ ಪ್ರತಿಷ್ಠಾಪಿಸಿ ಒಟ್ಟಿಗೆ ಮೂರು ರಥಗಳನ್ನು ಎಳೆಯುವ ಮೂಲಕ ಅದ್ದೂರಿ ಆಚರಣೆ ಸಂಪನ್ನಗೊಂಡಿತು.ನಂಬಿಹಳ್ಳಿ ಮತ್ತು ಸಾಗತವಳ್ಳಿಯ ಎರಡು ರಥವನ್ನು ಆನೆಕೆರೆಗೆ ತಂದು ನಿಲ್ಲಿಸಿ, ನಂತರ ಆನೆಕೆರೆಯಮ್ಮನ ದೊಡ್ಡ ರಥವನ್ನು ಸಿಂಗರಿಸಿ ನಿಲ್ಲಿಸಲಾಗುತ್ತದೆ. ಮಂಗಳವಾರ ರಾತ್ರಿ ಆನೆಕೆರೆಯ ಬೀದಿಗಳಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ಮರುದಿನ ರಥದಲ್ಲಿ ಕುಳ್ಳಿರಿಸಿ ಎಳೆಯಲಾಗುತ್ತದೆ.ರಥೋತ್ಸವದ ಹಿಂದಿನ ದಿನ ರಾತ್ರಿಪೂರ್ತಿ ಕೆಂಡೋತ್ಸವ, ವೀರಭದ್ರ ಕುಣಿತ, ಸೋಮನ ಕುಣಿತ, ಬೊಂಬೆ ಕುಣಿತ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಗತವಳ್ಳಿ ಕಲಾವಿದ ಪಾಂಡು ಎಂಬವರ ಕೈಚಳಕದಲ್ಲಿ ಅರಳಿದ ತರಕಾರಿ ಕಲೆ ಎಲ್ಲರ ಗಮನ ಸೆಳೆಯಿತು.ರಥೋತ್ಸವದಲ್ಲಿ ಹಣ್ಣು, ಜವನ ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ಪ್ರತಿವರ್ಷ ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಕೋಣನನ್ನು ಬಲಿಕೊಟ್ಟು ನೈವೇದ್ಯ ಅರ್ಪಿಸುವ ಪದ್ಧತಿ ಆಚರಿಸಲಾಗುತ್ತದೆ. ಜಿಲ್ಲಾಡಳಿತ ಪ್ರಾಣಿವಧೆ ಮಾಡದಂತೆ ಎಷ್ಟೇ ಎಚ್ಚರ ವಹಿಸಿದರೂ, ಎಲ್ಲರ ಕಣ್ತಪ್ಪಿಸಿ, ಕೋಣ ಬಲಿ ಕೊಡುವುದು ಹಲವು ಸಮಯದಿಂದ ನಡೆದು ಬಂದಿದೆ.ಉತ್ಸವ ಮೂರ್ತಿ ದೇವಸ್ಥಾನಕ್ಕೆ ತಲುಪಿದ ನಂತರ ಗ್ರಾಮದ ಹಿರಿಯರು ಕೋಲಾಟ ಪ್ರದರ್ಶನ ನಡೆಸಿಕೊಟ್ಟರು. ಈ ಜಾತ್ರೆ ನಡೆದ ಒಂದು ತಿಂಗಳ ನಂತರ ಮರಿ ಜಾತ್ರೆಯನ್ನು ಕೂಡ ಇದೇ ಗ್ರಾಮದಲ್ಲಿ ಏರ್ಪಡಿಸಲಾಗುತ್ತದೆ. ಇದನ್ನೂ ನೋಡಿ: ಚಿಕ್ಕಮಗಳೂರು: ಬೆಂಕಿ ರಂಗನಾಥನ ಜಾತ್ರೆಯ ಸಡಗರ, ಮೂರು ದಿನ ಸಂಭ್ರಮ

Category

🗞
News
Transcript
00:30Let's go.
01:05Let's go.
Comments

Recommended