Skip to playerSkip to main content
  • 4 hours ago
ಧಾರವಾಡ: ರೆಡ್​ ವಿಕಾಸ ನಿಗಮ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​, ಹು-ಧಾ ಮಹಾನಗರ ಪಾಲಿಕೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಿಎಸ್ಆರ್ ಯೋಜನೆ ಅಡಿ ಅಂದಾಜು ₹50 ಕೋಟಿ ಅನುದಾನದಲ್ಲಿ ನಿರ್ಮಿತವಾದ ನೂತನ ಕ್ರೀಡಾ ಸಂಕೀರ್ಣ ಮತ್ತು ಅಂತಾರಾಷ್ಟ್ರೀಯ ಮಟ್ಟದ ಈಜುಕೋಳ ಉದ್ಘಾಟನೆಗೊಂಡಿತು.ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಉದ್ಘಾಟಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್, ಪಾಲಿಕೆ ಮೇಯರ್​ ಜ್ಯೋತಿ ಪಾಟೀಲ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ ನಾಯಕರು ಭಾಗವಹಿಸಿದ್ದರು.ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಒಂದು ಕ್ರೀಡಾ ಸಂಕೀರ್ಣ ಹಾಗೂ ನೂತನ ಈಜುಕೋಳ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ. ಸುಮಾರು ಐವತ್ತೆರಡು ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿಕೊಂಡರು.ಈ ಕ್ರೀಡಾ ಸಂಕೀರ್ಣದ ಜೊತೆಗೆ ಈಜುಕೊಳವನ್ನು ಕೆಲ ಈಜುಪಟುಗಳು ಸ್ವಿಮ್ಮಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಇಬ್ಬರು ಕೇಂದ್ರ ಸಚಿವರು ಬ್ಯಾಡ್ಮಿಂಟನ್ ಆಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮನ್ಸುಖ್ ಮಾಂಡವಿಯಾ ಬ್ಯಾಡ್ಮಿಂಟನ್ ಆಡುವ ಮೂಲಕ ಕೋರ್ಟ್ ಉದ್ಘಾಟಿಸಿದರು. ಮನ್ಸುಖ್ ಮಾಂಡವಿಯಾ ಜೊತೆ ಹೊರಟ್ಟಿ, ಪ್ರಲ್ಹಾದ ಜೋಶಿ ಜೊತೆ ಶಾಸಕ ಅರವಿಂದ ಬೆಲ್ಲದ ಸಾಥ್ ನೀಡಿದರು.ಇದನ್ನೂ ಓದಿ: ಹುಸ್ಕೂರು ಮದ್ದೂರಮ್ಮ ಜಾತ್ರೆ ಆರಂಭ : ಇಲ್ಲಿಗೆ ಬರಲಿವೆ ಸುಮಾರು 17 ತೇರುಗಳು

Category

🗞
News
Transcript
00:13Oh
00:14Wow
00:16First sir
00:48One more, one more, sir.
01:00One more, one more, sir.
Comments

Recommended