Skip to playerSkip to main content
  • 1 week ago
ದೇವನಹಳ್ಳಿ (ಬೆಂ. ಗ್ರಾಮಾಂತರ): ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳನೋರ್ವ ಮನೆಯೊಳಗೆ ತಗ್ಲಾಕಿಕೊಂಡ ಘಟನೆ ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣ ಸಮೀಪದ ಚಿಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.ಸಿಕ್ಕಿಬಿದ್ದ ಕಳ್ಳನನ್ನು ವಿಜಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡಿದ್ದಾರೆ. ನವೀನ್ (30) ಎಂಬಾತನೇ ಮನೆಗಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದವ. ಈತ ಯಲಹಂಕದ ಅದ್ದಗಾನಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ.ನವೀನ್ ಚಿಕ್ಕನಹಳ್ಳಿ ಗ್ರಾಮದ ಬೈರೇಗೌಡ ಎಂಬವರ ಮನೆಯ ಬಳಿ ಬಂದಿದ್ದ. ನಂತರ ಮನೆಯವರು ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋದಾಗ, ಕಬ್ಬಿಣದ ರಾಡ್​​ನಿಂದ ಬಾಗಿಲು ಒಡೆದು ಒಳಗೆ ನುಗ್ಗಿದ್ದಾನೆ. ಆದರೆ ಮನೆಯೊಳಗಿನ ಬೀರು ಒಡೆಯುತ್ತಿದ್ದ ವೇಳೆ ಪಕ್ಕದ ಮನೆಯವರು ಗಮನಿಸಿದ್ದಾರೆ. ತಕ್ಷಣವೇ ಅವರು ಸ್ಥಳಕ್ಕೆ ಬಂದು ಹೊರಗಿನಿಂದ ಮನೆಯ ಬಾಗಿಲು ಲಾಕ್ ಮಾಡಿದ್ದಾರೆ. ಇದರಿಂದ ಕಳ್ಳ ಮನೆಯೊಳಗೇ ಸಿಕ್ಕಿಬಿದ್ದಿದ್ದಾನೆ.ಬಳಿಕ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವಿಜಯಪುರ ಪೊಲೀಸರು ಬಾಗಿಲು ತೆಗೆದು ಮನೆಯೊಳಗಿದ್ದ ಕಳ್ಳನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ದಾವಣಗೆರೆ: ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆ ಕದ ತಟ್ಟಿ ಎಚ್ಚರಿಕೆ ನೀಡಿದ ಪೊಲೀಸರು

Category

🗞
News
Transcript
00:00Oh
00:34I am going to leave the house.
00:36I am going to leave the house.
00:37I am going to leave the house.
Comments

Recommended