ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ನಗರದ ಹಲವು ರಸ್ತೆಗಳಲ್ಲಿ ಮರಗಳಲ್ಲಿನ ಒಣಗಿರುವ ಕೊಂಬೆಗಳು, ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.ಜಂಬೂಸವಾರಿ ಮೆರವಣಿಗೆ, ಅಂಬಾರಿ ಬಸ್ ತೆರಳುವ ಹಾಗೂ ದಸರಾ ದೀಪಾಲಂಕಾರ ಮಾಡುವ ರಸ್ತೆಗಳಲ್ಲಿ ಬೀಳುವ ಹಂತದಲ್ಲಿರುವ ರೆಂಬೆ-ಕೊಂಬೆಗಳನ್ನು ಮಹಾನಗರ ಪಾಲಿಕೆಯ ಯಂತ್ರ ಬಳಸಿ ಕತ್ತರಿಸಲಾಗುತ್ತಿದೆ. ಅರಮನೆ ಮುಂಭಾಗದಿಂದ ಸಯ್ಯಾಜಿ ರಾವ್ ರಸ್ತೆ, ಆರ್ಎಂಸಿ ವೃತ್ತ, ಬಂಬೂಬಜಾರ್, ಬನ್ನಿಮಂಪಟದ ಹೈವೆ ವೃತ್ತ, ನೆಲ್ಸನ್ ಮಂಡೇಲಾ, ಚಾಮರಾಜ ಜೋಡಿ ರಸ್ತೆ, ಎನ್.ಎಸ್.ರಸ್ತೆ, ಜೆಎಲ್ ಬಿ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಮರಗಳಲ್ಲಿ ಒಣಗಿರುವ ರೆಂಬೆ - ಕೊಂಬೆಗಳನ್ನು ತೆರವು ಮಾಡಲಾಗುತ್ತಿದೆ.ಜಂಬೂಸವಾರಿ ಸಾಗುವ ಮಾರ್ಗಗಳಲ್ಲಿ ಕಂಡು ಬರುವ ಅಪಾಯಕಾರಿ ಮರಗಳನ್ನು ಕೂಡ ಗುರುತು ಮಾಡಿ, ರೆಂಬೆ-ಕೊಂಬೆಯನ್ನು ತೆರವುಗೊಳಿಸುವ ಮೂಲಕ ದಸರಾ ಮಹೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸೆಸ್ಕ್ನಿಂದ ಈಗಾಗಲೇ ಮರಗಳಿಗೆ ದೀಪಾಲಂಕಾರ ಮಾಡಲಾಗುತ್ತಿದ್ದು, ಈ ವೇಳೆಯಲ್ಲಿ ಅಪಾಯ ಎದುರಾಗಬಾರದು ಎಂಬ ಉದ್ದೇಶದಿಂದ ಕೊಂಬೆಗಳನ್ನು ತೆರವು ಮಾಡಲಾಗುತ್ತಿದೆ.ನಗರ ಪಾಲಿಕೆ ಆಯ್ತುಕರಾದ ಎಂ.ಕೆ.ಸವಿತಾ ಮಾತನಾಡಿ, ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ನಗರ ಪಾಲಿಕೆ ವತಿಯಿಂದ ನಗರದ ನಾನಾ ಕಡೆಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿನೆ ಮಾಡಲಾಗಿದೆ. ಸಂದೇಶ್ ಪ್ರಿನ್ಸ್ ರಸ್ತೆ, ಕುಪ್ಪಣ್ಣ ಪಾರ್ಕ್ ರಸ್ತೆ , ಸರ್ಕಾರಿ ಅತಿಥಿ ಗೃಹ, ಗಾಯತ್ರಿಪುರಂ ಬಳಿ ನೀರಿನ ಟ್ಯಾಂಕ್ ಕಾಮಗಾರಿ, ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ರಸ್ತೆ, ಜೆಸಿಇ ಕಾಲೇಜು ರಸ್ತೆಗಳು, ಕಾಳಿದಾಸ ರಸ್ತೆ, ದಸರಾ ಮಾರ್ಗದ ಎಲ್ಲಾ ಕಾಮಗಾರಿಗಳನ್ನು ಪರಿಶೀಲಿಸಲಾಗಿದೆ. ನಜರ್ಬಾದ್, ಹಾರ್ಡಿಂಗ್ ವೃತ್ತದ ಚರಂಡಿ ಕಾಮಗಾರಿಯನ್ನು ನಿಗದಿತ ದಿನಾಂಕದೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಇವುಗಳನ್ನೂ ಓದಿ:ಮೈಸೂರು ದಸರಾ-2026: ಈ ಬಾರಿ ದಸರಾ ಕಾರ್ಯಕ್ರಮ ಕಂಪ್ಲೀಟ್ ಮಾಹಿತಿ ನೀಡಲಿದ್ದಾರೆ 'ಅಮ್ಮು' 'ಗಜ್ಜು'ಮೈಸೂರು ದಸರಾ - 2026: ಗಜಪಡೆಗಳ ತೂಕ ಪರಿಶೀಲನೆ, 44 ವರ್ಷದ ಸುಗ್ರೀವ 12 ಆನೆಗಳಲ್ಲಿ ಬಲಶಾಲಿ!
Comments