ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಬಸ್ ನಿಲ್ದಾಣದ ಮೇಲೆ ಅರಳಿಮರದ ಬೃಹತ್ ಕೊಂಬೆ ಬಿದ್ದು, ಬಸ್ ನಿಲ್ದಾಣ ಸಂಪೂರ್ಣ ಧ್ವಂಸಗೊಂಡಿದ್ದಲ್ಲದೆ ಬೈಕ್ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ದೇವಸ್ಥಾನದ ಸನಿಹವೇ ಇರುವ ಅಶ್ವತ್ಥ ಕಟ್ಟೆಗೆ ಹೊಂದಿಕೊಂಡಿರುವ ಬಸ್ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಶ್ವತ್ಥ ಕಟ್ಟೆಯ ಅರಳಿಮರದ ಬೃಹತ್ ಕೊಂಬೆ ಬಸ್ ನಿಲ್ದಾಣದ ಮೇಲೆ ಬಿದ್ದ ಪರಿಣಾಮ ಬಸ್ ಶೆಲ್ಟರ್ ಮತ್ತು ಬೈಕ್ ಜಖಂ ಆಗಿವೆ. ಅವಘಡ ಸಂಭವಿಸಿದ ವೇಳೆ ಬಸ್ ತಂಗುದಾಣದಲ್ಲಿ ಜನರು ಇರಲಿಲ್ಲ, ಅವಘಡದಲ್ಲಿ ಭಕ್ತರಿಗೆ, ವ್ಯಾಪಾರಸ್ಥರಿಗೆ, ನಾಗರಿಕಗೆ ಯಾವುದೇ ಹಾನಿಯಾಗಿಲ್ಲ. ಕಳೆದ ಮಂಗಳವಾರ ಸಹ ಮರದ ಕೊಂಬೆ ಬಿದ್ದಿತ್ತು. ಇಂದು ಸಹ ಬೃಹತ್ ಕೊಂಬೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಅಶ್ವತ್ಥ ಕಟ್ಟೆಯಲ್ಲಿರುವ ಅರಳಿ ಮರ ನೂರು ವರ್ಷಕ್ಕೂ ಹಳೆಯ ಮರವಾಗಿದ್ದು, ಮರದ ಕೊಂಬೆಗಳು ವಿಸ್ತಾರವಾಗಿ ಹರಡಿವೆ. ಗಾಳಿ ಮಳೆಯ ಒತ್ತಡಕ್ಕೆ ಮರದ ಕೊಂಬೆ ಮುರಿದು ಬೀಳುವ ಸಾಧ್ಯತೆ ಇದೆ. ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಹಳೆ ಮರಗಳು ಮುರಿದು ಬೀಳುವ ಸಾಧ್ಯತೆ ಇರುವ ಕೊಂಬೆಗಳನ್ನು ಕಟಾವ್ ಮಾಡುವ ಕೆಲಸ ಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ನವಲಗುಂದ: ಶಾಲೆಯ ಎರಡನೇ ಮಹಡಿಯಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು
Comments