Skip to playerSkip to main content
  • 8 minutes ago
ರಾಯಚೂರು: ಇರಾನ್–ಇಸ್ರೇಲ್ ಯುದ್ಧದಿಂದ ಪೆಟ್ರೋಲ್ ಕೊರತೆಯಾಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಹನ ಸವಾರರು ಪೆಟ್ರೋಲ್ ಬಂಕ್‌ಗಳತ್ತ ಮುಗಿಬಿದ್ದ ದೃಶ್ಯ ಕಳೆದ ರಾತ್ರಿ ಕಂಡುಬಂತು.ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಬಂಕ್‌ಗಳೆದುರು ತಡರಾತ್ರಿವರೆಗೂ ಸಾಲಿನಲ್ಲಿ ನಿಂತ ಜನರು ಇಂಧನ ಪಡೆಯಲು ಹರಸಾಹಸಪಟ್ಟರು. ವದಂತಿಯಿಂದ ಆತಂಕಗೊಂಡು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹಿಸಲು ಮುಂದಾದ ಕಾರಣ ಕೆಲವೆಡೆ ತಾತ್ಕಾಲಿಕವಾಗಿ ಇಂಧನ ಕೊರತೆ ಉಂಟಾಗಿ ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿದೆ.ಈ ಕುರಿತು ಜಿಲ್ಲಾಧಿಕಾರಿ ನಿತೀಶ್.ಕೆ. ಅವರು ಮಾತನಾಡಿ, ಗೃಹ ಬಳಕೆಯ ಅಡುಗೆ ಅನಿಲ ಕೊರತೆಯಿಲ್ಲ. ಬುಕಿಂಗ್ ನಂತರ ನಿಗದಿತ ಅವಧಿಯಲ್ಲಿ ಸಿಲಿಂಡರ್ ದೊರೆಯಲಿದೆ. ಅಲ್ಲದೇ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಣೆ ಮಾಡಿಕೊಳ್ಳಲಾಗುತ್ತಿದೆ. ಇತ್ತ ಪೆಟ್ರೋಲ್ ಸಿಗುವುದಿಲ್ಲ ಎನ್ನುವ ವಂದತಿಯಿಂದ ಜನರು ಪೆಟ್ರೋಲ್​ಗಾಗಿ ಕ್ಯಾನ್, ಡಬ್ಬಿಗಳಲ್ಲಿ ಹಾಕಿಸಿಕೊಂಡು ಅವಶ್ಯಕತೆಗಿಂತ ಹೆಚ್ಚು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಅಂತಹ ಯಾವುದೇ ಇಂಧನ ತೊಂದರೆಯಿಲ್ಲ. ಯಾವುದೇ ವಂದತಿಗೆ ಕಿವಿಕೊಡಬೇಡಿ ಎಂದು ತಿಳಿಸಿದರು.ಸುಳ್ಳು ವಂದತಿ ಹಬ್ಬಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಮತ್ತು ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಅಕ್ರಮವಾಗಿ ಮಾರಾಟ ಮಾಡಿದಲ್ಲಿ, ಅಂತಹವರ ವಿರುದ್ಧವೂ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ಇದನ್ನೂ ನೋಡಿ: ಹೆದ್ದಾರಿ ಅಕ್ಕಪಕ್ಕದ ಪೆಟ್ರೋಲ್ ಬಂಕ್​ಗಳಲ್ಲಿ ನೋ ಸ್ಟಾಕ್: ವದಂತಿಗಳಿಗೆ ಕಿವಿಗೊಡದಂತೆ ಡಿಸಿ ಮನವಿ

Category

🗞
News
Transcript
00:12This is not a gas station, we have a cylinder in the air, but it is not a gas station.
00:16We have a cylinder in the air, but it is not a gas station.
00:19and there are three hundred and ten parts of the city.
01:15So, if you look at the domestic leak, you can see the leak on the other side.
01:19Now immediate rate
01:20MADHIR MADHIR MADHIR
Comments

Recommended