Skip to playerSkip to main content
  • 2 days ago
ಹುಬ್ಬಳ್ಳಿ : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ‌ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಹಿಂದ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟೈಯರ್​​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಘೋಷಣೆ ಕೂಗಿದ ಅವರು, ಕಾಂಗ್ರೆಸ್ ಸಿದ್ದರಾಮಯ್ಯರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.ಈ ವೇಳೆ ಮಾತನಾಡಿದ ಅಹಿಂದ ಮುಖಂಡ ಸಿದ್ದಣ್ಣ ತೇಜಿ ಅವರು, 'ರಾಜ್ಯದ ಜನತೆಗೆ ಭಾಗ್ಯಗಳನ್ನು ಕರುಣಿಸಿದ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ. ಈ ಹಿಂದೆ ರಾಜೀವ ಗಾಂಧಿ, ಬಂಗಾರಪ್ಪ ಅವರಿಂದ ಸಿಎಂ ಸ್ಥಾನ ಕಸಿದುಕೊಂಡಾಗ ಕಾಂಗ್ರೆಸ್ ‌ಮುಕ್ತ ಮಾಡಿದ್ದರು. ಈಗ ಅವರ ಮಗ ರಾಹುಲ್ ಗಾಂಧಿ ಅವರು ಅಹಿಂಸಾ ನಾಯಕ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿ ಕಾಂಗ್ರೆಸ್ ಮುಕ್ತ ಮಾಡಿಕೊಳ್ಳಲು ಹೊರಟಿದ್ದಾರೆ. ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಕಾಂಗ್ರೆಸ್​ಗೆ ಕೊನೆ ಮೊಳೆ ಹೊಡೆದು, ಕಾಂಗ್ರೆಸ್ ಸರ್ವನಾಶ ಮಾಡಿದ್ದಾರೆ' ಎಂದರು. ಅಹಿಂದ ವರ್ಗ ಇಂದಿನಿಂದ ಸುಮ್ಮನೆ ಕೂರುವುದಿಲ್ಲ. ನಾವು ಸಿದ್ದರಾಮಯ್ಯ ಅವರನ್ನು ನೋಡಿ ಮತ ಹಾಕಿದ್ದು, ರಾಹುಲ್ ಗಾಂಧಿ ನೋಡಿ ಅಲ್ಲ. ಬ್ಲಾಕ್​ಮೇಲ್ ಮಾಡಿ ಕೆಳಗೆ ಇಳಿಸಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ನಾವು‌ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ :  ಸಿದ್ದರಾಮಯ್ಯರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಿಲ್ಲ: ಪ್ರಹ್ಲಾದ ಜೋಶಿ

Category

🗞
News
Transcript
00:03સાકષ્ટુ યોજનગળે કોટુ
00:06પંચઈ યોજનગે કોટુ રાક્ટુ રાકષ્ટુ જંડ્રિગે રાક્ટુ સાકષ્ટુ સભ્લીકરણ તંદુ કોટ્ટ્ટુ એક
00:28સીત્રામએરગે ક્યે ખ્લગેળિસી મુક્તય ઉનો માડુકે પીજેપી પએરં કાંંરલીસો આળાગે ઓક્તદં
00:56Thank you very much.
01:21Thank you very much.
Comments

Recommended