Skip to playerSkip to main content
  • 17 minutes ago
ದಾವಣಗೆರೆ : ದಾವಣಗೆರೆ ದಕ್ಷಿಣ ಮತಕ್ಷೇತ್ರದ ಉಪಚುನಾವಣೆ ರಂಗೇರಿದೆ. ಟಿಕೆಟ್​ಗಾಗಿ ಪಟ್ಟು ಹಿಡಿದಿದ್ದ ಅಲ್ಪಸಂಖ್ಯಾತರ ಕೈ ತಪ್ಪಿದೆ. ಈ ನಡುವೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೂರನೇ ತಲೆಮಾರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಲಾಗಿದೆ. ಈ ಕುರಿತು ಸಮರ್ಥ್ ಶಾಮನೂರು ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದು, 'ಟಿಕೆಟ್ ಸಿಕ್ಕಿರುವುದು ಸಿಕ್ಕಾಪಟ್ಟೆ ಖುಷಿಯಾಗಿದೆ. ಬಂಡಾಯ ಎದ್ದಿರುವ ಮುಸ್ಲಿಂ ಮುಖಂಡರನ್ನು ಮನವೊಲಿಸುತ್ತೇವೆ. ಅವರ ಮನೆಯ ಮಗ ನಾನು. ಎಲ್ಲಾ ವರ್ಗದ ಜನರನ್ನು ಜೊತೆಗೆ ತೆಗೆದುಕೊಂಡು ಹೋಗುವುದೇ ನಮ್ಮ ಕೆಲಸ' ಎಂದರು. 'ಶಾಮನೂರು ಶಿವಶಂಕರಪ್ಪ ಅವರು ಮಾಡಿರುವ ಅಭಿವೃದ್ಧಿ ಕೆಲಸ ಮುಂದೆ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇನೆ. ತಾತ ಶಾಮನೂರು ಶಿವಶಂಕರಪ್ಪ ಅವರು ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಕಾಟನ್‌ಮಿಲ್​ಗಳು ಬಂದದ ಆಗಿದ್ದಾಗ ಅಜ್ಜರು ಏಕೈಕ ವ್ಯಕ್ತಿಯಾಗಿ ದಾವಣಗೆರೆಯನ್ನು ವಿದ್ಯಾ ಕೇಂದ್ರವನ್ನಾಗಿ ಮಾಡ್ಬೇಕೆಂಬ ಕನಸು ಕಂಡಿದ್ದರು. ಇದಲ್ಲದೇ, ಚಿತ್ರದುರ್ಗದಿಂದ ದಾವಣಗೆರೆ ಬೇರ್ಪಟ್ಟಾಗ ಬೆಣ್ಣೆ ನಗರಿಯನ್ನು ಹೇಗೆ ಮೇಲಕ್ಕೆ ಎತ್ತಿದ್ರು, ಅಭಿವೃದ್ಧಿ ಮಾಡಿದ್ರು ಎಂಬುದು ಎಲ್ಲ ಜನರಿಗೂ ಗೊತ್ತಿದೆ' ಎಂದು ಹೇಳಿದ್ರು.ಇನ್ನು ಪ್ರಚಾರಕ್ಕಿಳಿಯುವ ಬಗ್ಗೆ ಮಾತನಾಡಿ, ಚುನಾವಣೆ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದೇವೆ. ಜೊತೆಗೆ ಮೊದಲಿನಿಂದಲೂ ಜನಸೇವೆ ಮಾಡ್ತಿದ್ದೇನೆ ಎಂದು ತಿಳಿಸಿದರು. ಕಾಲಿಗೆ ಚಪ್ಪಲಿ ಹಾಕದೆ ಪ್ರಚಾರ ಮಾಡ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅದು ಪದ್ಧತಿ. ಕಾಲಿಗೆ ಚಪ್ಪಲಿ ಹಾಕದೆ ನಮಸ್ಕಾರ ಮಾಡುವುದು ಆಚಾರ. ಪ್ರಚಾರಕ್ಕೆ ತೆರಳಿದಾಗ ಹೆಜ್ಜೆಗೆ ಹೆಜ್ಜೆಗೂ ಒಬ್ಬೊಬ್ಬರು ಮತದಾರರು ಸಿಗ್ತಾರೆ. ಆಗ ಚಪ್ಪಲಿ ಬಿಟ್ಟು ನಮಸ್ಕಾರ ಮಾಡಲು ಆಗಲ್ಲ. ಅದಕ್ಕೆ ಚಪ್ಪಲಿ ಹಾಕಿಲ್ಲ ಎಂದು ಅಭ್ಯರ್ಥಿ ಸಮರ್ಥ್​ ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ : ಟಿಕೆಟ್ ಸಿಕ್ಕಿದ್ದು ಖುಷಿಯಾಗಿದೆ‌, ಅಲ್ಪಸಂಖ್ಯಾತರನ್ನು ಕರೆದು ಮಾತನಾಡುತ್ತೇವೆ‌: ಸಮರ್ಥ್ ಶಾಮನೂರು

Category

🗞
News
Transcript
00:00foreign
00:11foreign
00:12foreign
00:12foreign
00:43They look like the people who are coming again.
00:46They are coming from the village.
00:52Are you talking about this?
00:54Yes.
00:57I am talking about the village of Shannoum Shushankra.
00:58They are coming from the village of Shannoum Shushankra.
01:01They are coming from the village and the village of the village of Shannoum Shushankra's.
01:24Thank you very much.
02:06Thank you very much.
Comments

Recommended