Skip to playerSkip to main content
  • 3 hours ago
ಚಾಮರಾಜನಗರ: ರೈತರ ಜಮೀನುಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದೆ. ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ಸೋಮವಾರ ಸಂಜೆ ಒಂದೂವರೆ ವರ್ಷದ ಗಂಡು ಹುಲಿ ಸೆರೆ ಸಿಕ್ಕಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಕಗ್ಗಳದಹುಂಡಿ, ಚೆನ್ನಮಲ್ಲಿಪುರ ಸುತ್ತಮುತ್ತಲು ಓಡಾಡಿ ಆತಂಕ ಸೃಷ್ಟಿಸಿದ ಹುಲಿಯನ್ನು ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದರು.ಡ್ರೋನ್​​ ಹಾಗೂ ಜಯಪ್ರಕಾಶ್, ಧರ್ಮ ಎಂಬ ಸಾಕಾನೆಗಳನ್ನು ಬಳಸಿಕೊಂಡು ಮದ್ದೂರು ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊದಲಿಗೆ ಕಗ್ಗಳದಹುಂಡಿ ಅನಿಲ್ ಎಂಬುವರ ಜಮೀನಿನಲ್ಲಿ ಹುಲಿ ಇರುವುದನ್ನು ಪತ್ತೆ ಹಚ್ಚಿದರು. ಬಳಿಕ ನಿಗಾ ವಹಿಸಿ ಚೆನ್ನಮಲ್ಲಿಪುರ ಗ್ರಾಮದ ನಾಗಪ್ಪ ಎಂಬವರ ಬಾಳೆ ತೋಟದಲ್ಲಿ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ.ಹುಲಿಯು ಮೇಲ್ನೋಟಕ್ಕೆ ಆರೋಗ್ಯವಾಗಿದ್ದು, ಅದರ ಮೇಲೆ ನಿಗಾ ಇಡಲು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 40ಕ್ಕೂ ಅಧಿಕ ಸಿಬ್ಬಂದಿ, ಪೊಲೀಸ್ ಇಲಾಖೆಯ 20ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.ಇವುಗಳನ್ನೂ ಓದಿ:ಮೈಸೂರು: ತಾಯಿಯೊಂದಿಗೆ ಹುಲಿ ಮರಿಗಳ ಚಿನ್ನಾಟ; ಮತ್ತೊಂದೆಡೆ ಚಿರತೆ ದಾಳಿಗೆ ಕರು ಬಲಿಮೈಸೂರು: ದಮ್ಮನಕಟ್ಟೆಯಲ್ಲಿ ಸಫಾರಿಗರಿಗೆ ದರ್ಶನ ನೀಡಿದ ಮೂರು ಹುಲಿಗಳು

Category

🗞
News
Transcript
00:27Die, die, die!
01:00Thank you very much.
Comments

Recommended