Skip to playerSkip to main content
  • 1 day ago
ಮೈಸೂರು: ಯುಗಾದಿ ಸಂಭ್ರಮ ಮುಗಿಸಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನವಾಗಿದೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಮೂಲಕ ಸಫಾರಿಗೆ ತೆರಳಿದ ಪ್ರವಾಸಿಗರು, ಹಚ್ಚ ಹಸಿರಿನ ನಡುವೆ ಹುಲಿಗಳ ಸಂಚಾರ ಕಂಡು ಸಂತಸಪಟ್ಟರು.ಯುಗಾದಿ ಮುನ್ನ ಪೂರ್ವ ಮುಂಗಾರಿನಲ್ಲೇ ಮಳೆ ಅಬ್ಬರ ತೋರುತ್ತಿರುವುದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.ಬಂಡೀಪುರದಲ್ಲಿ ಒಂದೇ ಬಾರಿ 6 ಹುಲಿಗಳ ದರ್ಶನ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇತ್ತೀಚಿಗೆ ಆರು ಹುಲಿಗಳ ದರ್ಶನವಾಗಿತ್ತು. ಮೈ ಸುಡುವ ಬಿಸಿಲಿಂದ ಪಾರಾಗಲು ಈ ಹುಲಿಗಳು ಬಂಡೀಪುರದ ಸಫಾರಿ ಝೋನಿನ ಕಿರುಬನ ಕೊಳಚಿ ಕೆರೆಗಿಳಿದಿದ್ದವು. ಒಟ್ಟಿಗಿದ್ದ ಆರು ಹುಲಿಗಳನ್ನು ಕಂಡು ಸಫಾರಿಗರು ಸಂತಸಪಟ್ಟಿದ್ದರು.ಈ ಪೈಕಿ ಮೂರು ಹುಲಿಗಳು 'ಮೂರ್ಕೆರೆ ಫೀಮೇಲ್' ಎಂದು ಕರೆಸಿಕೊಳ್ಳುತ್ತಿದ್ದ ಹಲಿ ಮರಿಗಳಾಗಿದ್ದು, ತಾಯಿ ನಾಪತ್ತೆಯಾಗಿತ್ತು. ಅದಾದ ಬಳಿಕ ಮೂರು ಮರಿಗಳು ಬೇಟೆ ಸಾಮರ್ಥ್ಯ ಬೆಳೆಸಿಕೊಂಡು ಒಟ್ಟಾಗಿ ಕಾಣಿಸಿಕೊಂಡಿದ್ದವು.  ಇದನ್ನೂ ಓದಿ: VIDEO: ಒಂದರ ಹಿಂದೆ ಒಂದು, ಮತ್ತೊಂದು.. ಬಂಡೀಪುರದಲ್ಲಿ ಒಂದೇ ಬಾರಿ 6 ಹುಲಿಗಳ ದರ್ಶನ - 6 TIGERS SIGHTED AT ONCE

Category

🗞
News
Comments

Recommended