Skip to playerSkip to main content
  • 5 hours ago
ನಾಸಿಕ್ (ಮಹಾರಾಷ್ಟ್ರ): ಮುಂಬೈ ಹೆದ್ದಾರಿಯಲ್ಲಿ ಬಿಜೆಪಿ ಸಂಸದರ ರೇಂಜ್ ರೋವರ್ ಕಾರು ಬೆಂಕಿಗೆ ಆಹುತಿಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ 13 ರಂದು ಬೆಳಗಿನ ಜಾವ 1:30ರ ಸುಮಾರಿಗೆ ಗೊಂಡೆ ಬಳಿ ಈ ಘಟನೆ ನಡೆದಿದೆ. ರಾಜಸ್ಥಾನದ ಬಿಜೆಪಿ ಸಂಸದ ಲುಂಬರಂ ಚೌಧರಿ ಅವರು ತ್ರಯಂಬಕೇಶ್ವರ ಜ್ಯೋತಿರ್ಲಿಂಗದ ದರ್ಶನಕ್ಕೆ ವಾಶಿಮ್‌ನಿಂದ ಬಂದಿದ್ದರು. ಅವರು ರೇಂಜ್ ರೋವರ್ ಕಾರಿನಲ್ಲಿ (ಸಂಖ್ಯೆ MH 01. DK 9975) ಪ್ರಯಾಣಿಸುತ್ತಿದ್ದರು. ಕಾರನ್ನು ಶಹಾಪುರದ ಅನಿಲ್ ಜಾಧವ್ ಚಲಾಯಿಸುತ್ತಿದ್ದರು. ಕಾರು ನಾಸಿಕ್ ಬಳಿಯ ಗೊಂಡೆ ಫಾಟ್ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ, ಚಾಲಕನಿಗೆ ಇದ್ದಕ್ಕಿದ್ದಂತೆ ಕಾರಿನಲ್ಲಿ ಏನೋ ಉರಿಯುತ್ತಿರುವ ವಾಸನೆ ಬರಲು ಪ್ರಾರಂಭಿಸಿದೆ. ಆಗ ಒಂದು ಕ್ಷಣವೂ ತಡಮಾಡದೇ, ಅವರು ತಕ್ಷಣವೇ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾರೆ.ಕಾರಿಗೆ ಬೆಂಕಿ ತಗುಲಿದೆ ಎಂದು ಅರಿತುಕೊಂಡ ತಕ್ಷಣ, ಸಂಸದ ಲುಂಬರಂ ಚೌಧರಿ ಮತ್ತು ಇತರ ಸಹೋದ್ಯೋಗಿಗಳು ತಕ್ಷಣವೇ ಕಾರಿನಿಂದ ಕೆಳಗಿಳಿದಿದ್ದಾರೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ಸ್ವಲ್ಪ ಸಮಯದೊಳಗೆ ಬೆಂಕಿ ಕಾರನ್ನು ಅಕ್ಷರಶಃ ಸುಟ್ಟು ಭಸ್ಮ ಮಾಡಿದೆ. ಈ ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ವಾಡಿವೆರೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿದರು. ಸ್ಥಳೀಯ ನಾಗರಿಕರು ಅಗ್ನಿಶಾಮಕ ದಳಕ್ಕೆ ಈ ಬಗ್ಗೆ ಮಾಹಿತಿ ನೀಡಿದ ನಂತರ, ಸ್ವಲ್ಪ ಸಮಯದೊಳಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.  ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಸುಟ್ಟುಹೋದ ನಂತರ, ಕಾರಿನ ಅವಶೇಷ ಮಾತ್ರ ಉಳಿದಿತ್ತು. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.'ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಾವು ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ವಾಹನ ಡಿಕ್ಕಿಯ ಪ್ರಕರಣ ದಾಖಲಿಸಿದ್ದೇವೆ' ಎಂದು ವಾಡಿವೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಭಗವಾನ್ ಮಾಥುರೆ ತಿಳಿಸಿದ್ದಾರೆ.ಇದನ್ನೂ ಓದಿ :  ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ: ಅಂಗಡಿ ಸುಟ್ಟು ಭಸ್ಮ - FIRE CAUSED BY HELIUM GAS LEAK

Category

🗞
News
Transcript
00:00This video is brought to you by S.T.A.L.A.N.
Comments

Recommended