Skip to playerSkip to main content
  • 4 weeks ago
ರಾಯಚೂರು: ಹಾವು ಕಂಡರೆ ಎಲ್ಲರೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮನೆ ಮುಂದೆ ಪ್ರತ್ಯಕ್ಷವಾದ ನಾಗರಹಾವಿಗೆ ಪೂಜೆ ಸಲ್ಲಿಸಿರುವ ಅಪರೂಪದ ಘಟನೆ ನಡೆದಿದೆ.ರಾಯಚೂರು ಜಿಲ್ಲೆಯ ‌ಲಿಂಗಸೂಗೂರು ತಾಲೂಕಿನ ಜಂಗಿರಾಂಪೂರು ತಾಂಡಾದಲ್ಲಿ ಸೋಮವಾರ ಈ ಘಟನೆ ನಡೆದಿದೆ. ತಾಂಡದ ನಿವಾಸಿಯಾಗಿರುವ ಸುನೀಲ್ ಪವಾರ್ ಎನ್ನುವರ ಮನೆಯ ಮುಂದೆ ನಾಗರಹಾವು ಪ್ರತ್ಯಕ್ಷವಾಗಿದ್ದು, ಎಲ್ಲರೂ ಭಯಭೀತರಾಗಿದ್ದರು. ಆಗ ಉರಗರಕ್ಷಕರಿಗೆ ಮಾಹಿತಿ ನೀಡಿದ್ದು, ಉರಗ ರಕ್ಷಕ ಮನೆಗೆ ಆಗಮಿಸಿದ್ದರು.ಆದರೆ ಹಾವನ್ನು ಸೆರೆ ಹಿಡಿಯುವುದಕ್ಕೂ ಮುನ್ನ ಸುನೀಲ್​ ಪವಾರ್​ ನಾಗರಹಾವಿಗೆ ಪೂಜೆ ಮಾಡಿ ಆರಾಧಿಸಿದ್ದಾರೆ. ಮನೆಯ ಮುಂದೆ ನಾಗಪ್ಪ ಬಂದಿದ್ದಾನೆ ಎಂದು ಮನೆಯ ಮಾಲೀಕ ಹೆಡೆಯೆತ್ತಿ ನಿಂತಿದ್ದ ಹಾವಿಗೆ ಪೂಜೆ ಮಾಡಿದ್ದಾರೆ. ಕಾಯಿ ಒಡೆದು ನಮಸ್ಕರಿಸಿದ್ದಾ‌ರೆ. ಈ ವೇಳೆ ಹಾವು ಕೂಡ ಹೆಡೆ ಎತ್ತಿ ನಿಂತು ಪೂಜೆ ಸ್ವೀಕರಿಸಿದಂತೆ ಕಂಡು ಬಂದಿದೆ. ಅಲ್ಲದೇ ಗ್ರಾಮಸ್ಥರು ಈ ಅಪರೂಪದ ದೃಶ್ಯ ನೋಡಲು ಮುಗಿಬಿದ್ದಿದ್ದರು. ಪೂಜೆ ಬಳಿಕ ಉರಗರಕ್ಷಕ ಹಾವನ್ನು ಹಿಡಿದು ಕೊಂಡೊಯ್ದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಮನೆಯ ಮಾಲೀಕ ಹಾವಿಗೆ ಪೂಜೆ ಮಾಡುವುದನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.ಇದನ್ನೂ ನೋಡಿ: ಆನೇಕಲ್: ಚಪ್ಪಲಿಯಲ್ಲಿದ್ದ ಕೊಳಕು ಮಂಡಲ ಕಚ್ಚಿ ಟೆಕ್ಕಿ ಸಾವು

Category

🗞
News
Transcript
00:00Music
00:04Music
Be the first to comment
Add your comment

Recommended