Skip to playerSkip to main content
  • 2 months ago
ಶಿವಮೊಗ್ಗ: ಜಿಲ್ಲಾ ಬಿಜೆಪಿ‌ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ವೇಳೆ ಮಹಿಳಾ ಎಎಸ್ಐ ಅವರ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದು ಹೋಗಿರುವ ಘಟನೆ ನಡೆದಿದೆ.ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರು ತೆಗೆದು ಹಾಕಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಶಿವಮೊಗ್ಗದ ಜಿಲ್ಲಾ ಬಿಜೆಪಿ‌ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಕಾರ್ಯಕರ್ತರನ್ನು ಬಂಧಿಸುವ ವೇಳೆ ಕೋಟೆ‌ ಪೊಲೀಸ್ ಠಾಣೆಯ ಮಹಿಳಾ ಎಎಸ್ಐ ಅಮೃತ ಬಾಯಿ ಎಂಬುವವರ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದು‌ ಹೋಗಿದೆ. ಬಂದೋಬಸ್ತ್​​ಗೆ ಬಂದಾಗ ಈ ರೀತಿಯ ಘಟನೆಯನ್ನು ಯಾರು ನಿರೀಕ್ಷಿಸಿದ್ದಿರಲಿಲ್ಲ. ಮಾಂಗಲ್ಯ ಸರ ಕಳೆದುಕೊಂಡ ಅಮೃತಬಾಯಿ ಅವರು ಹುಡುಕಿ ಹುಡುಕಿ, ಕಣ್ಣಿರು ಹಾಕುತ್ತಾ ಸಾಗಿದರು. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಂಗ್ರೆಸ್​ ಕಾರ್ಯಕರ್ತರು ಮೊದಲು ಶಿವಮೊಗ್ಗದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ನಂತರ ಏಕಾಏಕಿ ಬಿಜೆಪಿ ಕಡೆ ಓಡಿ ಬಂದರು. ಪೊಲೀಸರು ಮೊದಲೇ ಬ್ಯಾರಿಕೇಡ್​ ಹಾಕಿಕೊಂಡಿದ್ದರು. ಇದರಿಂದ ಬಿಜೆಪಿ ಕಚೇರಿ ಬಳಿ ಯಾವ ಕಾರ್ಯಕರ್ತರು ಹೋಗದಂತೆ ಪೊಲೀಸರು ತಡೆದರು. ಈ ಮಧ್ಯೆ ಎಎಸ್ಐ ಅವರ ಮಾಂಗಲ್ಯ ಸರ ಕಳೆದು ಹೋಗಿದೆ.ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮಂಡ್ಯ, ಶಿವಮೊಗ್ಗ ಚಾಮರಾಜನಗರದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ

Category

🗞
News
Transcript
00:00For more information, visit www.FEMA.gov
Comments

Recommended