Skip to playerSkip to main content
  • 30 minutes ago
ಬೆಂಗಳೂರು: ಕಬ್ಬು, ಮೆಕ್ಕೆಜೋಳ ಮತ್ತು ಭತ್ತದಿಂದ ಎಥೆನಾಲ್ ಉತ್ಪಾದನೆಗೆ ರೈತ ಸಂಘಟನೆಗಳು ಮತ್ತು ತಜ್ಞರು ಬೆಂಬಲ ನೀಡಿದ್ದಾರೆ. ಜೊತೆಗೆ ಇದರ ಬಳಕೆಯಿಂದ ರೈತರಿಗೂ ಲಾಭ ಮತ್ತು ಪರಿಸರಕ್ಕೂ ಅನುಕೂಲ ಎಂದು ಪ್ರತಿಪಾದಿಸಿದ್ದಾರೆ.ಎಥೆನಾಲ್ ಉತ್ಪಾದನೆಯಿಂದ ಕಬ್ಬು ಬೆಳೆಗಾರರಿಗೆ ಯಾವ ರೀತಿ ಸಹಕಾರಿ ಆಗುತ್ತದೆ ಮತ್ತು ಎಥೆನಾಲ್ ಬಳಕೆಯಿಂದ ಪರಿಸರಕ್ಕೆ ಆಗುವ ಅನುಕೂಲಗಳ ಬಗ್ಗೆ ಚರ್ಚೆ ಮಾಡಿದ್ದು, ತಜ್ಞರು ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಎಥೆನಾಲ್ ಬಳಕೆಯಿಂದ ರೈತರಿಗೆ ಮತ್ತು ಪರಿಸರಕ್ಕೂ ಲಾಭ ಎಂಬುದು ನಮಗೆ ಮನದಟ್ಟಾಗಿದೆ. ಕಬ್ಬು, ಭತ್ತ, ಜೋಳ ಮತ್ತು ಮೆಕ್ಕೆಜೋಳ ಸೇರಿ ಕೃಷಿ ಉತ್ಪನ್ನ ಬೆಳೆಯುವ ರೈತರಿಗೆ ಇದರಿಂದ ಲಾಭ ಆಗಲಿದೆ. ಈ ಬಗ್ಗೆ ರಾಜ್ಯವ್ಯಾಪಿ ಕಾರ್ಯಕ್ರಮ ಮಾಡಿ, ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ. ಜೊತೆಗೆ ಎಥೆನಾಲ್ ಬಳಕೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಎಥೆನಾಲ್ ಉತ್ಪಾದನೆಯಿಂದ ಈ ವರ್ಷ ಮೆಕ್ಕೆಜೋಳಕ್ಕೆ ತುಂಬಾ ಬೇಡಿಕೆ ಬಂದಿದೆ. ಹಾಗೆಯೇ ಕಬ್ಬು ಬೆಳೆಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭ ಆಗುವ ಸಾಧ್ಯತೆ ಇದೆ. ಎಥೆನಾಲ್ ಬಳಕೆಗೆ ಯಾರೇ ವಿರೋಧಿಸಿದ್ರೂ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು ಎಂದರು.  ಎಥೆನಾಲ್ ಕುರಿತು ರಾಷ್ಟ್ರೀಯ ಮಟ್ಟದ ಜಾಗೃತಿ ವಿಚಾರ ಸಂಕಿರಣ ಸೆಪ್ಟೆಂಬರ್ 27 ಮತ್ತು 28 ರಂದು ಮುಂಬೈನಲ್ಲಿ ನಡೆಯಲಿದ್ದು, ರಾಜ್ಯದ ರೈತರು ಭಾಗವಹಿಸಲಿದ್ದಾರೆ ಎಂದು ರೈತ ನಾಯಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಥೆನಾಲ್ ಗೊಂದಲ: ಪೆಟ್ರೋಲ್​ ವಾಹನ ಖರೀದಿ ಇಳಿಕೆ, ಸಿಎನ್​ಜಿ-ಎಲೆಕ್ಟ್ರಿಕ್​ ಏರಿಕೆ

Category

🗞
News
Transcript
00:00Will we start to talk about other things?
00:06We'll start and talk about the other things in our industry.
00:09And today, we have to talk about other things about the world and about the same things.
00:16We will start and talk about the main shelters as well.
00:21We will talk about the other topics in our industry.
Comments

Recommended