Skip to playerSkip to main content
  • 1 week ago
ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಇತಿಹಾಸ ಪ್ರಸಿದ್ಧ ತಾವರೆ ಕೆರೆಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಿರುವ ಸ್ಥಳವನ್ನು ತೆರವುಗೊಳಿಸಿ ರಕ್ಷಿಸಬೇಕೆಂದು ಶಾಸಕ ಶ್ರಿವತ್ಸ ಒತ್ತುವರಿ ಮಾಡಿಕೊಂಡಿರುವ ಸ್ಥಳದಲ್ಲೇ ಪತ್ರಿಕಾಗೋಷ್ಠಿ ಮಾಡಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.ಮೈಸೂರು ನಗರದಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಬರುವ ತಾವರೆ ಕೆರೆಯ ಸಮೀಪದಲ್ಲಿ ಅಕ್ರಮವಾಗಿ ಕೆರೆಯನ್ನೇ ಒತ್ತುವರಿ ಮಾಡಿ ಆ ಜಾಗದಲ್ಲಿ ಅಕ್ರಮವಾಗಿ ತಂತಿಬೇಲಿ ಹಾಕುತ್ತಿದ್ದಾರೆ. ಇದು ದಾಖಲೆಯ ಪ್ರಕಾರ ಕುರುಬರಲ್ಲಿ ಸರ್ವೇ ನಂಬರ್​ನಲ್ಲಿದ್ದು, ಈ ಕೆರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ, ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮುಡಾ ಅಧಿಕಾರಿಗಳು ಮೌನವಾಗಿ ಇರುವುದು ಸಂಶಯಕ್ಕೆ ಕಾರಣವಾಗಿದೆ. ಇದರ ಹಿಂದೆ 100 ಕೋಟಿ ವ್ಯವಹಾರ ಆಗಿದೆ ಎಂದು ಆರೋಪಿಸಿದ್ದಾರೆ.ಕೂಡಲೇ ಈ ಕೆರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳಿಂದ ಬಿಡಿಸಿಕೊಡಬೇಕು. ಹಾಗೂ ಹಿಂದಿನ ದಾಖಲೆಯ ಪ್ರಕಾರ ಈ ಸ್ಥಳ ಕೆರೆ ಎಂದು ಗುರುತಾಗಿದ್ದು, ಇದನ್ನು ಉಳಿಸಬೇಕೆಂದು ಸ್ಥಳದಲ್ಲಿ ನಾಗರಿಕರು ಹೇಳುತ್ತಿದ್ದು, ಕೂಡಲೇ ಈ ಸ್ಥಳವನ್ನು ಜಿಲ್ಲಾಡಳಿತ ತಮ್ಮ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.ಇದನ್ನೂ ನೋಡಿ: ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ - ಜಿಪಿಎ ಹೋಲ್ಡರ್ ದೇವರಾಜು ನಡುವೆ ಮಾತಿನ ಚಕಮಕಿ.!

Category

🗞
News
Transcript
00:00Master Planets are now marked by this project.
00:07This is the 3rd project.
00:10The project has a number of 300 plans.
00:17This project has been a number of projects.
00:232 months ago, we were able to see the project.
Comments

Recommended