ಹಾವೇರಿ: ತಾಲೂಕಿನ ಹಾವನೂರು ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವ ಮಂಗಳವಾರ ನಡೆಯಿತು. 'ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್' ಎಂದು ಗೊರವಯ್ಯ ದೈವವಾಣಿ ನುಡಿದರು.ಹಾವನೂರು ಗ್ರಾಮದ ಜೋಗನ ಮರಡಿಯಲ್ಲಿ 12 ಅಡಿ ಎತ್ತರದ ಬಿಲ್ಲನೇರಿದ ಗೊರವಯ್ಯ ಸ್ವಾಮಿ ಪ್ರಸ್ತುತ ವರ್ಷದ ಕಾರ್ಣಿಕೋತ್ಸವ ನುಡಿದಿದ್ದಾರೆ. ಪ್ರಸ್ತಕ ವರ್ಷ ರೈತರು ಬೆಳೆದ ಬೆಳೆಗಳ ಬೆಲೆ ಏರಿಕೆಯಾಗುತ್ತಿದೆ. ಹೆಚ್ಚಿನ ಲಾಭ ಗಳಿಸಲಿದ್ದಾರೆ ಎಂಬ ಸೂಚನೆಯನ್ನು ಗೊರವಯ್ಯ ನೀಡಿದರು.ಆನಂದ ಬಿಲ್ಲರ ಹೆಸರಿನ ಗೊರವಯ್ಯ ಈ ಕಾರ್ಣಿಕ ನುಡಿದರು. ಈ ಕ್ಷೇತ್ರದಲ್ಲಿ ಸುಮಾರು 360 ವರ್ಷಗಳಿಂದ ಕಾರ್ಣಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸಾಕ್ಷಾತ್ ದೇವರೇ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಕಾರ್ಣಿಕದ ಬಗ್ಗೆ ಭಕ್ತರಲ್ಲಿ ಸಾಕಷ್ಟು ನಂಬಿಕೆ ಮನೆ ಮಾಡಿದೆ.ಇದನ್ನೂ ಓದಿ: ಚಿಕ್ಕಮಗಳೂರು: ಕಳಸೇಶ್ವರ ಸ್ವಾಮಿಗೆ ಗಿರಿಜನರಿಂದ ಇಡುಗಾಯಿ ಸೇವೆದೇವರಗುಡ್ಡದ ಕಾರ್ಣಿಕ (ಪ್ರತ್ಯೇಕ ಸುದ್ದಿ) : ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ ಅಕ್ಟೋಬರ್ 1, 2025ರಂದು ಸಂಜೆ ನಡೆದಿತ್ತು. ಸಂಜೆಯಾಗುತ್ತಿದ್ದಂತೆ ಗೊರವಯ್ಯ ಸಹಸ್ರಾರು ಭಕ್ತರ ಮುಂದೆ ಕಾರ್ಣಿಕ ನುಡಿದಿದ್ದರು.ಸುಮಾರು 21 ಅಡಿಯ ಬಿಲ್ಲನ್ನೇರಿದ ಗೊರವಯ್ಯ ನಾಗಪ್ಪಜ್ಜ ಉರ್ಮಿ, 'ನಾಡಿನ ಬಂಗಾರದ ಗಿಂಡಿ ನಾಡೆಲ್ಲಾ ಸಂಪಾದಿತಲೇ ಪರಾಕ್' ಎಂದು ನುಡಿದು ಮೇಲಿನಿಂದ ದುಮುಕಿದರು.
Comments