Skip to playerSkip to main content
  • 2 days ago
ಚಿಕ್ಕಮಗಳೂರು: ಶ್ರೀ ಕಳಸೇಶ್ವರ ಸ್ವಾಮಿಗೆ ಗಿರಿಜನರು ಶ್ರದ್ಧಾ ಭಕ್ತಿಯಿಂದ ಇಡುಗಾಯಿ ಸೇವೆ ಸಲ್ಲಿಸಿದರು. ನಂತರ ರಥೋತ್ಸವ ಮುಗಿದ ಹಿನ್ನೆಲೆಯಲ್ಲಿ ಗಿರಿಜನರು ರಥ ಬಿಚ್ಚಿದರು. ದೇವರ ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಿತು.ಗಿರಿಜನರು ಅನಾದಿ ಕಾಲದಿಂದಲೂ ಕಟ್ಟುಪಾಡುಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದು, ಶ್ರೀ ಕಳಸೇಶ್ವರ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದಾರೆ. ಅದರಂತೆ ಬ್ರಹ್ಮ ರಥ ಕಟ್ಟುವ ಮತ್ತು ರಥೋತ್ಸವ ಮುಗಿದ ನಂತರ ಬಿಚ್ಚುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ.ಶ್ರೀ ಕಳಸೇಶ್ವರ ಸ್ವಾಮಿಯ ರಥೋತ್ಸವದ ನಂತರ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಉತ್ಸವದ ಅಂಗವಾಗಿ ಕುಂಕುಮೋತ್ಸವ, ಮೃಗಯಾತ್ರೆ ನೆರವೇರಿಸಲಾಯಿತು. ಪವಿತ್ರ ರುದ್ರ ತೀರ್ಥದಲ್ಲಿ ವರುಣ ಹೋಮ ಮತ್ತು ಅವಭೃತ ಸ್ನಾನದ ನಂತರ ದೇವರಿಗೆ ವಿಶೇಷ ಪೂಜೆ ನಡೆಯಿತು.ಇದಕ್ಕೂ ಮೊದಲು, ಕಳಸ ಪಟ್ಟಣದಲ್ಲಿರುವ ಕಳಸೇಶ್ವರ ಸ್ವಾಮಿಯ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತ್ತು. ಸಾವಿರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡರು. ಪಟ್ಟಣದ ಸುತ್ತಮುತ್ತಲ ಹೊರನಾಡು, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಮತ್ತಿತರ ಕಡೆಯಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ದೇವಾಲಯವನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಸ್ಥಳೀಯ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಬಂದಿದ್ದ ಪ್ರವಾಸಿಗರೂ ಜಾತ್ರೆಯಲ್ಲಿ ಭಾಗವಹಿಸಿದರು.ಇವುಗಳನ್ನೂ ಓದಿ:ಶ್ರೀ ಅಂತರಘಟ್ಟಮ್ಮ ದೇವಿ ರಥಕ್ಕೆ ಎತ್ತಿನ ಗಾಡಿ ಡಿಕ್ಕಿ, ವ್ಯಕ್ತಿಗೆ ಗಂಭೀರ ಗಾಯ: ವಿಡಿಯೋಮಾಘ ಹುಣ್ಣಿಮೆ: ಶ್ರೀ ನಂಜುಂಡೇಶ್ವರನ ದರ್ಶನಕ್ಕೆ ಹರಿದುಬಂತು ಭಕ್ತ ಸಾಗರ

Category

🗞
News
Transcript
00:00.
Comments

Recommended