Skip to playerSkip to main content
  • 7 weeks ago
ಶಿವಮೊಗ್ಗ: ಸಾಗರ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಬಂದ್​ಗೆ ಕರೆ ನೀಡಿದ್ದು, ಇಂದು ಸಾಗರ ಪಟ್ಟಣ ಸಂಪೂರ್ಣ ಬಂದ್ ಆಗಿದೆ.ಪಟ್ಟಣದ ಕೋರ್ಟ್ ಸರ್ಕಲ್​​, ಐತಪ್ಪ ಸರ್ಕಲ್​, ಜೋಗ ರಸ್ತೆ ಸೇರಿದಂತೆ ವಿವಿಧ ವೃತ್ತಗಳಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.ಸಾಗರ ಬಸ್​ ನಿಲ್ದಾಣ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗರದ ಗಾಂಧಿ ಮೈದಾನ ತಲುಪಿದ್ದು, ಇಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ‌‌‌. ಸಭೆಯ ನಂತರ ಸಾಗರ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಲಿದ್ದಾರೆ.ಸಿಎಂಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ: ಸಾಗರ ಪಟ್ಟಣವನ್ನು ಜಿಲ್ಲೆಯನ್ನಾಗಿಸಬೇಕೆಂದು ಆಗ್ರಹಿಸಿ ಸಾಗರ ಹೋರಾಟ ಸಮಿತಿ ಬಂದ್​ಗೆ ಕರೆ ನೀಡಿದ ಬೆನ್ನಲ್ಲೇ ಸಾಗರ ವಿಧಾನಸಭೆ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸಾಗರ ತಾಲೂಕಿನಲ್ಲಿ ಇರುವ ವಿಶೇಷ ಪ್ರವಾಸಿ ತಾಣಗಳಾದ ಜೋಗ, ಶರಾವತಿ ಹಿನ್ನೀರು, ಜೈನ ಬಸದಿಗಳು, ಪ್ರಸಿದ್ಧ ತಾಳಗುಪ್ಪ ರೈಲು ನಿಲ್ದಾಣ , ಕೆಳದಿ, ಇಕ್ಕೆರಿ ತಾಣಗಳನ್ನು ಉಲ್ಲೇಖಿಸಿದ್ದು, ಕೆಳದಿ ಅರಸರು ತಾಲೂಕಿನಲ್ಲಿ ಆಡಳಿತ ಮಾಡಿದ್ದನ್ನು‌ ನಮೂದಿಸಿ ಸಾಗರವನ್ನು ಜಿಲ್ಲೆಯನ್ನಾಗಿಸಲು ಎಲ್ಲ ಅರ್ಹತೆಗಳಿವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Category

🗞
News
Transcript
00:00ShriPalividad
00:02ShriPal
00:07like
00:11lily
00:18be
00:20l
00:22channel
00:25costumes
00:28save you
00:30take you
00:32take you
00:34take you
00:37I'll as in my friends
00:39oh
00:40do I do
00:43do I do
00:44do I do
00:45do I do
00:47do I do
00:49do I do
00:51do
00:55do
00:56do
00:57Oh
01:27Oh
01:57I don't know how to do it.
Comments

Recommended