Skip to playerSkip to main content
  • 7 weeks ago
ಬಾಗಲಕೋಟೆ: ಬಾದಾಮಿ ತಾಲೂಕಿನ‌ ಕೆರೂರ ಪಟ್ಟಣದಲ್ಲಿ 9 ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆಗಳಾದ ದ್ಯಾಮವ್ವ-ದುರ್ಗವ್ವ ದೇವಿಯ ಜಾತ್ರಾ ರಥೋತ್ಸವ ಅದ್ಧೂರಿಯಾಗಿ ನಡೆಯಿತು.ಈ ಜಾತ್ರೆ ನಡೆದರೆ 15 ದಿನಗಳ ಕಾಲ ರೈತರು ಬಿತ್ತುವ, ನೇಕಾರರು ನೇಯುವ ಕೆಲಸ ಮಾಡುವಂತಿಲ್ಲ. ಮನೆಯಲ್ಲಿ ಯಾವುದೇ ಆಹಾರ ಧಾನ್ಯ ಬೀಸುವಂತಿಲ್ಲ‌, ಕುಟ್ಟುವಂತಿಲ್ಲ, ರೊಟ್ಟಿ ಮಾಡುವಂತಿಲ್ಲ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ.180 ವರ್ಷಗಳ ಹಿಂದೆ ಜಾತ್ರೆಯ ಸಂದರ್ಭ ಜಾತಿ ಸಂಘರ್ಷದಲ್ಲಿ ಕೊಲೆ ನಡೆದು ಜಾತ್ರೆಯೇ ಸ್ಥಗಿತಗೊಂಡಿತ್ತು. 2017ರಲ್ಲಿ ಗ್ರಾಮ ದೇವತೆಗಳ ಜಾತ್ರೆಯನ್ನು ಪುನಾರಂಭಿಸಿ ಊರಿನ ಮುಖಂಡರು ಇತಿಹಾಸ ನಿರ್ಮಿಸಿದ್ದರು. ಇದೀಗ ಒಂಬತ್ತು ವರ್ಷಗಳ ನಂತರ ಎರಡನೇ ಜಾತ್ರೋತ್ಸವ ನಡೆಯುತ್ತಿದೆ. ಐದು ದಿನಗಳ ಕಾಲ ಭಕ್ತ ಸಾಗರದ ಮಧ್ಯೆ ಗ್ರಾಮ ದೇವತೆಯರ ಜಾತ್ರೆ ನಡೆಯುತ್ತಿದೆ. ಹೆಲಿಕಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡಿದ್ದು, ವಿಶೇಷವಾಗಿ ಗಮನ ಸೆಳೆಯಿತು.ಹುಬ್ಬಳ್ಳಿ-ಸೋಲಾಪುರ ಹೆದ್ದಾರಿಯುದ್ಧಕ್ಕೂ ಭಂಡಾರ ಜಾತ್ರೆ ಎಂದು ಕಣ್ಮನ ಸೆಳೆಯಿತು. ಪಟ್ಟಣದ ತುಂಬ ದೇವಿಯರ ಮೂರ್ತಿಗಳ ಮೆರವಣಿಗೆ ನಡೆದ ಬಳಿಕ, ರಥೋತ್ಸವ ಜರುಗಿತು. ಇದನ್ನೂ ನೋಡಿ: ಬಿಳಿಗಿರಿ ಬನದಲ್ಲಿ ದೊಡ್ಡ ಜಾತ್ರೆ ಸಂಭ್ರಮ: ರಥೋತ್ಸವಕ್ಕೂ ಮುನ್ನ ಆಗಸದಲ್ಲಿ ಹಾರಾಡಿದ ಗರುಡ

Category

🗞
News
Transcript
00:001.
00:132.
00:136.
00:135.
00:147.
00:147.
00:148.
00:1414.
00:27Hey!
00:55Oh
01:15I love you.
01:44You
Comments

Recommended