Skip to playerSkip to main content
  • 1 day ago
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಲ್ಲಿ ಸಂಭ್ರಮದ ರಾಮನವಮಿ ಹಬ್ಬವನ್ನು ಆಚರಣೆ ಮಾಡಲಾಯಿತು. ದೇಶದೆಲ್ಲೆಡೆ ಇಂದು ರಾಮನ ನಾಮ ಜಪ ನಡೆಯುತ್ತಾ ಇದೆ. ರಾಮನ ಜನ್ಮ ದಿನ ಅಂತಾನೆ ಕರೆಸಿಕೊಳ್ಳುವ ಈ ದಿನವನ್ನು ಸಮಸ್ತ ಸನಾತನ ಹಿಂದೂ ಧರ್ಮದವರು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಹಾಗಿದ್ದರೆ, ಕಾಫಿನಾಡು ಚಿಕ್ಕಮಗಳೂರಲ್ಲಿ ರಾಮನವಮಿಯ ಸಂಭ್ರಮ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯಿರಿ.  ನಗರದ ಭಾರ್ಗವಪುರಿ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇಗುಲದಲ್ಲಿ ರಾಮ ನವಮಿ ಹಿನ್ನಲೆ ಶ್ರೀ ರಾಮನಿಗೆ ವಿಶೇಷ ಪೂಜಾ ವಿಧಿ-ವಿಧಾನಗಳನ್ನ ನೆರವೇರಿಸಲಾಯಿತು. ರಾಮನ ಭಕ್ತರು ಬೆಳಗ್ಗೆಯಿಂದಲೇ ದೇಗುಲಕ್ಕೆ ಬಂದು ಶ್ರೀ ರಾಮನ ದರ್ಶನ ಪಡೆದರು. ಅಲ್ಲದೇ ವಿಶ್ವದಲ್ಲೇ ಅತ್ಯಂತ ಪುರಾತನ ರಾಮ ದೇಗುಲಗಳಲ್ಲಿ ಒಂದಾಗಿರುವ ಈ ರಾಮನ ದೇವಸ್ಥಾನದಲ್ಲಿ ಕನ್ನಡದಲ್ಲಿ ಪೂಜೆ ಆಗುವುದು ವಿಶೇಷ.  ಭಕ್ತರು ಇಲ್ಲಿ ಶ್ರೀ ರಾಮ ಜಯ ರಾಮ ಎಂದು ಬರೆದು ದೇವರಿಗೆ ಅರ್ಪಿಸುತ್ತಾರೆ. ಅಲ್ಲದೇ, ನಗರದ ತೆಗೂರು ಆಂಜನೇಯ, ಬಸವನಹಳ್ಳಿಯ ರಾಮನ ದೇವಸ್ಥಾನ ಸೇರಿದಂತೆ ಇನ್ನೂ ಹಲವು ಹನುಮ ದೇಗುಲದಲ್ಲಿಯೂ ಕೂಡ ರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಚೈತ್ರಮಾಸದ ಯುಗಾದಿಯ ನಂತರ ಬರುವ ಅತಿಮುಖ್ಯ ಹಬ್ಬ ಎಂದರೆ ಅದು ಶ್ರೀ ರಾಮನವಮಿ. ಭಾರತ ದೇಶದಲ್ಲಿ ಆರ್ಯ ಸಂಸ್ಕೃತಿಗೆ ಸೇರಿದ ಎಲ್ಲಾ ಜನರು ಆತ್ಮೀಯತೆಯಿಂದ ಆಚರಿಸುವ ಹಬ್ಬ ಇದಾಗಿದೆ. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದಾ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ.ಇದನ್ನೂ ಓದಿ : ನಾಡಿನಾದ್ಯಂತ ಸಂಭ್ರಮದ ಶ್ರೀ ರಾಮನವಮಿ ಆಚರಣೆ: ಬಳ್ಳಾರಿ - ಗಂಗಾವತಿಯಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದ ರಾಮ ಭಕ್ತರು

Category

🗞
News
Transcript
00:00I don't know what I'm saying.
Comments

Recommended