ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ಖನನ ಕಾರ್ಯ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಉತ್ಖನನ ಕಾರ್ಯದ ಸಂದರ್ಭದಲ್ಲಿ ಅಪರೂಪದ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ.ಉತ್ಖನನ ಸ್ಥಳದ A-ಗುಂಡಿಯಲ್ಲಿ ಅಡಿಕೆ ಆಕಾರದ ಶಿಲೆ ಕಂಡುಬಂದಿದ್ದು, ಅದರ ಕೆಳಭಾಗದಲ್ಲಿ ರಂಧ್ರ (ಹೊಳೆ) ಇರುವುದು ವಿಶೇಷ. ಇದು ಅಪರೂಪದ ಶಿಲೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದೇ ಸಂದರ್ಭದಲ್ಲಿ ಮುಕುಟ ಮಣಿ (ಕಿರೀಟ ರತ್ನ) ಆಕೃತಿಯ ಶಿಲಾವಸ್ತುವೊಂದು ಸಿಕ್ಕಿದ್ದು, ಇದು ದೇವಾಲಯದ ಶಿಖರ ಭಾಗ ಅಥವಾ ಕಿರೀಟದ ಮೇಲ್ಭಾಗಕ್ಕೆ ಸಂಬಂಧಿಸಿದ ವಸ್ತು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪತ್ತೆಯಾದ ಶಿಲೆ ಭಗ್ನಾವಸ್ಥೆಯಲ್ಲಿದ್ದರೂ ಅದರ ಶಿಲ್ಪಕಲೆ ಹಾಗೂ ವಿನ್ಯಾಸ ಪ್ರಾಚೀನ ಕಾಲದ ವೈಭವವನ್ನು ಸ್ಮರಿಸುವಂತಿದೆ.ಪತ್ತೆಯಾದ ಈ ಅವಶೇಷಗಳು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದು, ಉತ್ಖನನ ಕಾರ್ಯದಿಂದ ಇನ್ನಷ್ಟು ಮಹತ್ವದ ಶಿಲ್ಪಗಳು, ಪ್ರಾಚ್ಯಾವಶೇಷಗಳು ಹೊರಬರುವ ನಿರೀಕ್ಷೆಯಿದೆ.ಸ್ಥಳಕ್ಕೆ ಭೇಟಿ ನೀಡಿರುವ ಪುರಾತತ್ವ ತಜ್ಞರು ಶಿಲೆಯ ಸ್ವರೂಪ, ಬಳಕೆ ಮತ್ತು ಕಾಲಘಟ್ಟದ ಕುರಿತು ಅಧ್ಯಯನ ಮುಂದುವರೆಸಿದ್ದಾರೆ.ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿಯಲ್ಲಿನ ಉತ್ಖನನ ಕಾರ್ಯ; A-1, B-1 ಗುಂಡಿಗಳಲ್ಲಿ ಬಿರುಕು!
Comments