Skip to playerSkip to main content
  • 1 week ago
ಧಾರವಾಡ: ನಾಡಿನಾದ್ಯಂತ ಇಂದು ಶಿವರಾತ್ರಿ ಸಂಭ್ರಮವಿದೆ. 'ದಕ್ಷಿಣ ಕಾಶಿ' ಎಂದೇ ಹೆಸರುವಾಸಿಯಾಗಿರುವ ಧಾರವಾಡದ ಸೋಮೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ದೇವರ ದರ್ಶನ ಪಡೆಯುತ್ತಿದ್ದಾರೆ.ಶನಿವಾರ ಮಧ್ಯರಾತ್ರಿಯಿಂದಲೇ ಶಾಲ್ಮಲಾ ನದಿ ತಟದಲ್ಲಿರುವ ಐತಿಹಾಸಿಕ ದೇಗುಲಕ್ಕೆ ಭಕ್ತರು ಬರುತ್ತಿದ್ದಾರೆ. ಸುಡು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆವ ಭಕ್ತರು, ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ, ಕ್ಷೀರಾಭಿಷೇಕ ನೆರವೇರಿಸುತ್ತಿದ್ದರು.ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಜಾಗರಣೆ ನಡೆಯಲಿದೆ. ಭಕ್ತರು ಶಿವನ ಹೆಸರಿನಲ್ಲಿ ಉಪವಾಸ ವ್ರತ ಕೈಗೊಂಡಿದ್ದಾರೆ. ವ್ರತ ಕೈಗೊಂಡವರಿಗೆ ದೇಗುಲದ ಆವರಣದಲ್ಲಿ ಅನೇಕ ಭಕ್ತರು, ಖರ್ಜೂರ, ಬಾಳೆಹಣ್ಣು ಹಾಗು ದ್ರಾಕ್ಷಿ ಹಣ್ಣುಗಳನ್ನು ವಿತರಿಸುತ್ತಿದ್ದರು.ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನ. ಪ್ರತೀ ವರ್ಷ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಆಚರಣೆ ನಡೆಯುತ್ತದೆ.ಇನ್ನು ಮಹಾಶಿವರಾತ್ರಿ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿಗೆ ಇಂದು 11 ಕೆ.ಜಿಯ ಚಿನ್ನದ ಮುಖವಾಡ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಇವುಗಳನ್ನೂ ಓದಿ:ಮೈಸೂರು: ತ್ರಿನೇಶ್ವರ ಸ್ವಾಮಿಗೆ 11 ಕೆ.ಜಿಯ ಚಿನ್ನದ ಮುಖವಾಡ ತೊಡಿಸಿ ವಿಶೇಷ ಪೂಜೆಶಿವಮೊಗ್ಗ: ಮಾರೀಚನಿಂದ ಪೂಜಿಸಲ್ಪಡುತ್ತಿದ್ದ ಶಿವಲಿಂಗವನ್ನು ಮೃಗವಧೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀರಾಮ!

Category

🗞
News
Transcript
00:00I
01:00Thank you very much.
01:30Prayer of the
02:17Oh
02:48Come on, come on, come on.
02:51Come on, come on.
03:19Come on, come on.
Comments

Recommended