ಮೈಸೂರು: ಮಹಾ ಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಮೈಸೂರಿನಲ್ಲಿ ಗುಜರಾತಿನ ಸುಪ್ರಸಿದ್ಧ ಶ್ರೀ ಸೋಮನಾಥ ದರ್ಶನ ಮಾದರಿಯಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನವನ್ನು ಆಯೋಜನೆ ಮಾಡಲಾಗಿದೆ. ಭಕ್ತರು ಭೇಟಿ ನೀಡಿ ಲಿಂಗಗಳ ದರ್ಶನ ಪಡೆಯುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾ ಶಿವರಾತ್ರಿಗೆ ಭಕ್ತರು ಸಿದ್ದಗೊಳ್ಳುತ್ತಿದ್ದಾರೆ. ಒಂದು ಕಡೆ ಮೈಸೂರಿನ ಹಲವು ಕಡೆ ಶಿವ ದೇವಾಲಯಗಳಲ್ಲಿ ಸ್ವಚ್ಛತೆಯ ಜೊತೆಗೆ ಶಿವರಾತ್ರಿಗೆ ಸಿದ್ಧಗೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನಿಲಯದವರು ನಗರದಲ್ಲಿ ಶ್ರೀ ಸೋಮನಾಥ ದೇವಾಲಯದ ಮಾದರಿ ನಿರ್ಮಿಸಿದ್ದಾರೆ. ಅದರಲ್ಲಿ ನವದುರ್ಗೆಯರು, 12 ಜ್ಯೋತಿರ್ಲಿಂಗ ದರ್ಶನದ ಮಾದರಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಸಹ ಆಯೋಜನೆ ಮಾಡಲಾಗಿದೆ. ಇಲ್ಲಿ ಶ್ರೀ ಸೋಮನಾಥ ಮಂದಿರದ ಪ್ರತಿಕೃತಿ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಹಾಗೂ ಗುರಿ ಸಾಧನೆ ಬಗ್ಗೆ ಸಮಾಲೋಚನೆ, ಮೌಲ್ಯ, ಆಟ, ಧ್ಯಾನ ಮುಂತಾದ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಒತ್ತಡದ ಜೀವನದಲ್ಲಿ ಯಾವ ರೀತಿ ನಡೆಯಬೇಕು ಎಂಬುದಕ್ಕೆ ಧಾರ್ಮಿಕತೆಯಲ್ಲಿ ಉತ್ತರ ಇದೆ ಎಂಬ ಸತ್ಯ ದರ್ಶನ ಇಲ್ಲಿದೆ.ಇದನ್ನೂ ಓದಿ : ಕೊಟ್ಟೂರೇಶ್ವರ ಮಹಾ ರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ - KOTTURESHWAR JATRE
Comments