ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿ, ಇದೀಗ ಮನಮಿಡಿಯೋ ಎರಡು ಹೊಸ ಧಾರವಾಹಿಗಳನ್ನ ನಿಮ್ಮ ಮುಂದೆ ತರುತ್ತಿದೆ. ಒಂದು ಗೌರಿಕಲ್ಯಾಣ ಧಾರವಾಹಿ ಆದ್ರೆ ಮತ್ತೊಂದು ಪವಿತ್ರ ಬಂಧನ ಸೀರಿಯಲ್.. ಬೆಂಗಳೂರಿನಲ್ಲಿ ಸದ್ದಿಗೋಷ್ಟಿ ಮಾಡಿ ಈ ಎರಡೂ ಧಾರವಾಹಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಗೌರಿ ಕಲ್ಯಾಣ ಧಾರವಾಹಿಯನ್ನ ರಾಮ್ಜಿ ನಿರ್ಮಾಣ ಮಾಡುತ್ತಿದ್ದು, ಭರತ್ ಕುಮಾರ್ ಎನ್ ಮೈಸೂರು ನಿರ್ದೇಶನ ಇರಲಿದೆ. ಪವಿತ್ರ ಬಂಧನ ಧಾರವಾಹಿಯಲ್ಲಿ ಬಿಗ್ಬಾಸ್ ಸೂರಜ್ ಕಾಣಿಸಿಕೊಳ್ಳುತ್ತಿದ್ದು, ಈ ಧಾರವಾಹಿಯನ್ನ ಉತ್ತಮ್ ಮಧು ಅವರ ನಿರ್ದೇಶನ ಮಾಡುತ್ತಿದ್ದಾರೆ.
Comments