ಪುಣೆ(ಮಹಾರಾಷ್ಟ್ರ): ಗಣೇಶ ಚತುರ್ಥಿ ಹಿನ್ನೆಲೆ ಪುಣೆಯ ಶ್ರೀಮಂತ್ ದಗ್ಡುಶೇಠ್ ಹಲ್ವಾಯಿ ಗಣಪತಿ ದೇವಾಲಯದಲ್ಲಿ 35 ಸಾವಿರ ಮಹಿಳೆಯರು ಏಕಕಾಲದಲ್ಲಿ ಅಥರ್ವಶೀರ್ಷ (ಗಣೇಶ ಸ್ತೋತ್ರ) ಪಠಣದ ಮೂಲಕ ವಿನಾಯಕನಿಗೆ ನಮನ ಸಲ್ಲಿಸಿದರು.ಶ್ರೀಮಂತ್ ದಗ್ಡುಶೇಠ್ ಹಲ್ವಾಯಿ ಸಾರ್ವಜನಿಕ ಗಣಪತಿ ಟ್ರಸ್ಟ್ ಮತ್ತು ಸುವರ್ಣಯುಗ ತರುಣ್ ಮಂಡಳದ ವತಿಯಿಂದ 133ನೇ ವರ್ಷದ ಅಂಗವಾಗಿ ಇಂದು ಮುಂಜಾನೆ ಸುಮಾರು 35 ಸಾವಿರ ಮಹಿಳೆಯರಿಗಾಗಿ ಉತ್ಸವ ಮಂಟಪದ ಮುಂದೆ ಅಥರ್ವಶೀರ್ಷ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸದೆ ಸುನೇತ್ರಾ ಪವಾರ್ ಮತ್ತು ಮಂಡಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಧ್ಯರಾತ್ರಿ 12 ಗಂಟೆಯಿಂದಲೇ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಶಂಖನಾದದೊಂದಿಗೆ ಅಥರ್ವಶೀರ್ಷ ಪಠಣವನ್ನು ಪ್ರಾರಂಭಿಸಿದ್ದರು. ಬಳಿಕ ಕಾರ್ಯಕ್ರಮವು ಮಹಾ ಆರತಿಯೊಂದಿಗೆ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ಸಂಸದೆ ಸುನೇತ್ರಾ ಪವಾರ್ ಅವರು ದೇಶ ಮತ್ತು ರಾಜ್ಯದ ಎಲ್ಲ ಜನತೆಗೆ ಗಣೇಶೋತ್ಸವದ ಶುಭಾಶಯಗಳನ್ನು ತಿಳಿಸಿದರು.ಇದನ್ನೂ ಓದಿ: ಹಣೆ ಮೇಲೆ ತಿಲಕ, ಕೊರಳಲ್ಲಿ ಕೇಸರಿ ಶಾಲು, ಕೈಯಲ್ಲಿ ಗಣಪ: ಭಾವೈಕ್ಯತೆ ಮೆರೆದ ಬೆಳಗಾವಿ ಡಿಸಿ
Comments