Skip to playerSkip to main content
  • 6 months ago
ಪುಣೆ(ಮಹಾರಾಷ್ಟ್ರ): ಗಣೇಶ ಚತುರ್ಥಿ ಹಿನ್ನೆಲೆ ಪುಣೆಯ ಶ್ರೀಮಂತ್​ ದಗ್ಡುಶೇಠ್ ಹಲ್ವಾಯಿ ಗಣಪತಿ ದೇವಾಲಯದಲ್ಲಿ 35 ಸಾವಿರ ಮಹಿಳೆಯರು ಏಕಕಾಲದಲ್ಲಿ ಅಥರ್ವಶೀರ್ಷ (ಗಣೇಶ ಸ್ತೋತ್ರ) ಪಠಣದ ಮೂಲಕ ವಿನಾಯಕನಿಗೆ ನಮನ ಸಲ್ಲಿಸಿದರು.ಶ್ರೀಮಂತ್​ ದಗ್ಡುಶೇಠ್ ಹಲ್ವಾಯಿ ಸಾರ್ವಜನಿಕ ಗಣಪತಿ ಟ್ರಸ್ಟ್ ಮತ್ತು ಸುವರ್ಣಯುಗ ತರುಣ್ ಮಂಡಳದ ವತಿಯಿಂದ 133ನೇ ವರ್ಷದ ಅಂಗವಾಗಿ ಇಂದು ಮುಂಜಾನೆ ಸುಮಾರು 35 ಸಾವಿರ ಮಹಿಳೆಯರಿಗಾಗಿ ಉತ್ಸವ ಮಂಟಪದ ಮುಂದೆ ಅಥರ್ವಶೀರ್ಷ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸದೆ ಸುನೇತ್ರಾ ಪವಾರ್ ಮತ್ತು ಮಂಡಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಧ್ಯರಾತ್ರಿ 12 ಗಂಟೆಯಿಂದಲೇ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಶಂಖನಾದದೊಂದಿಗೆ ಅಥರ್ವಶೀರ್ಷ ಪಠಣವನ್ನು ಪ್ರಾರಂಭಿಸಿದ್ದರು. ಬಳಿಕ ಕಾರ್ಯಕ್ರಮವು ಮಹಾ ಆರತಿಯೊಂದಿಗೆ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ಸಂಸದೆ ಸುನೇತ್ರಾ ಪವಾರ್ ಅವರು ದೇಶ ಮತ್ತು ರಾಜ್ಯದ ಎಲ್ಲ ಜನತೆಗೆ ಗಣೇಶೋತ್ಸವದ ಶುಭಾಶಯಗಳನ್ನು ತಿಳಿಸಿದರು.ಇದನ್ನೂ ಓದಿ: ಹಣೆ ಮೇಲೆ ತಿಲಕ, ಕೊರಳಲ್ಲಿ ಕೇಸರಿ ಶಾಲು, ಕೈಯಲ್ಲಿ ಗಣಪ: ಭಾವೈಕ್ಯತೆ ಮೆರೆದ ಬೆಳಗಾವಿ ಡಿಸಿ

Category

🗞
News
Transcript
00:00Oh
00:30Satsang with Mooji
01:00Satsang with Mooji
01:30Satsang with Mooji
01:59Satsang with Mooji
02:29Satsang with Mooji
02:59Satsang with Mooji
03:29Satsang with Mooji
03:59Satsang with Mooji
04:29Satsang with Mooji
Comments

Recommended