Skip to playerSkip to main content
  • 17 hours ago
ಮೈಸೂರು : ತಾಯಿ ಆಸೆಯಂತೆ ಕಟ್ಟಿಸಿದ ದೇವಸ್ಥಾನದಲ್ಲಿ ಬಹುಭಾಷಾ ನಟ, ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರು ವಿಶ್ರಾಂತಿ ಪಡೆಯುವ ಮೂಲಕ ಸರಳತೆ ಮೆರೆದಿದ್ದಾರೆ.ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದಲ್ಲಿ ತಮ್ಮ ತಾಯಿ ಆಸೆಯಂತೆ 2025ರ ಎಪ್ರಿಲ್ ತಿಂಗಳಿನಲ್ಲಿ ಮಲೆ ಮಹದೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದರು. ಇದೀಗ ಮೂರು ದಿನಗಳ ಹಿಂದೆ ಕೆಂಬಾಲು ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ನೆಲದ ಮೇಲೆ ಮಲಗಿ, ವಿಶ್ರಾಂತಿ ಪಡೆದರು. ಅಲ್ಲದೇ, ನಿದ್ರಿಸಿ ಎದ್ದ ನಂತರ ದೇವಸ್ಥಾನದ ಆವರಣದಲ್ಲಿರುವ ತೆಂಗಿನಮರದಿಂದ ಸ್ಥಳೀಯರು ತಂದು ಕೊಟ್ಟ ಎಳನೀರನ್ನು ಕುಡಿದರು. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದ ಬಳಿಯೇ ಕಾಲ ಕಳೆದರು. ಸೂಪರ್ ಸ್ಟಾರ್‌ನ ಸಿಂಪಲ್ ಲೈಫ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಬಾಲು ಗ್ರಾಮದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ, ಚೋಳರ ಕಾಲದ ಮಲೆ ಮಹದೇಶ್ವರ ಸ್ವಾಮಿ ದೇವಾಲಯವಿತ್ತು. ತಮ್ಮ ತಾಯಿ ಮಹದೇವಮ್ಮ ಅವರ ಆಸೆಯಂತೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಈ ದೇವಸ್ಥಾನವನ್ನು ನವೀಕರಿಸಿದ್ದ ನಟ ಪ್ರಭುದೇವ ಅವರು ಅದನ್ನು ಕಳೆದ ವರ್ಷ ಉದ್ಘಾಟಿಸಿದ್ದರು.ನಟ ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರು ಮೂಲತಃ ಕೆಂಬಾಳುವಿನ ಸಮೀಪದ ದೂರ ಗ್ರಾಮದವರು. ತಮ್ಮ ಹುಟ್ಟೂರಿನಲ್ಲಿ ದೇವಾಲಯ ನಿರ್ಮಿಸಬೇಕೆಂಬ ಅವರ ಆಸೆಯನ್ನು ಪುತ್ರ ಪ್ರಭುದೇವ ಅವರ ಬಳಿ ಹೇಳಿಕೊಂಡಿದ್ದರು. ಹೀಗಾಗಿ, ಪ್ರಭುದೇವ ಅವರು ಕಳೆದ ಎಪ್ರಿಲ್​ನಲ್ಲಿ ತಮ್ಮ ಪತ್ನಿ ಹಿಮಾನಿ ಅವರೊಂದಿಗೆ ಬಂದು, ಹೋಮ-ಹವನಗಳ ಮೂಲಕ ದೇವಾಲಯದ ಜೀರ್ಣೋದ್ಧಾರ ಮಾಡಿದ್ದರು. ಇದನ್ನೂ ಓದಿ :  ಹಂಪಿ: ವಿಜೃಂಭಣೆಯಿಂದ ನಡೆದ ವಿರೂಪಾಕ್ಷೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ - HAMPI VIRUPAKSHESHWARA RATHOTSAVA

Category

🗞
News
Transcript
00:00Thank you for listening.
00:38Thank you for listening.
Comments

Recommended