Skip to playerSkip to main content
  • 6 months ago
ಮೈಸೂರು: ಮಾ.30ರಂದು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವದ ಹಿನ್ನೆಲೆಯಲ್ಲಿ ಇಂದು ದೇವಾಲಯದ ಆವರಣದಲ್ಲಿ ರಥ ಚಲನ ಮಹೋತ್ಸವಕ್ಕೆ ಚಾಲನೆ ದೊರೆಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ರಥಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ, ರಥ ಕಟ್ಟುವ ಕೆಲಸಕ್ಕೆ ಚಾಲನೆ ನೀಡಲಾಯಿತು.ಶ್ರೀ ನಂಜುಂಡೇಶ್ವರ ಸ್ವಾಮಿ ಮತ್ತು ಪಾರ್ವತಿ ಅಮ್ಮನವರಿಗೆ ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ, ನಿತ್ಯೋತ್ಸವ ಮತ್ತು ಮೂಲದೇವರ ಪೂಜೆ ನೆರವೇರಿಸಲಾಯಿತು. ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ, ಗಣಪತಿ ಪೂಜೆ ಹಾಗೂ ನವಗ್ರಹ ಪೂಜೆ ಸಲ್ಲಿಸಿ, ಪಟ್ಟಿಗೆ ನವಧಾನ್ಯ ಪೂಜೆ ಸಲ್ಲಿಸಲಾಯಿತು.     ನಂಜನಗೂಡು ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮೊದಲಿಗೆ ಶ್ರೀ ನಂಜುಂಡೇಶ್ವರ ಸ್ವಾಮಿ ರಥೋತ್ಸವ, ಪಾರ್ವತಿ ಅಮ್ಮನವರ ರಥೋತ್ಸವ, ಗಣಪತಿ, ಚಂಡಿಕೇಶ್ವರ ಮತ್ತು ಸುಬ್ರಮಣ್ಯ ರಥೋತ್ಸವಗಳನ್ನು ಮಾಡಲಾಗುತ್ತದೆ.ಇನ್ನು 25 ದಿನಗಳ ಒಳಗಾಗಿ ಐದು ರಥಗಳು ಸಿದ್ಧಗೊಳ್ಳಲಿವೆ.ಇದನ್ನೂ ಓದಿ: ಉಡುಪಿ ಸಾವಿರಾರು ಜನರಿಂದ ಜನಪದ ಹೋಳಿ: ಇಲ್ಲಿ ಬಣ್ಣಗಳ ಎರಚಾಟವಿಲ್ಲ! - HOLI CELEBRATION WITHOUT COLOR

Category

🗞
News
Transcript
00:00Thank you for joining us.
00:54Thank you for joining us.
Comments

Recommended