Skip to playerSkip to main content
  • 2 months ago
ಮೈಸೂರು: ಇಲ್ಲಿನ ಪ್ರವಾಸಿತಾಣಗಳಲ್ಲಿ ಪೆದ್ದಿ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ ಇರುವ ತೆಲುಗು ಚಿತ್ರರಂಗದ ಖ್ಯಾತ ನಟ ರಾಮಚರಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿಯಾದರು. ರಾಮಕೃಷ್ಣ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ನಟ ರಾಮಚರಣ್ ಅವರು ಸಿಎಂ ಅವರನ್ನು ಭೇಟಿಯಾಗಿ, ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಮೈಸೂರಿನಲ್ಲಿ ನಡೆಯುತ್ತಿರುವ ಪೆದ್ದಿ ಚಿತ್ರೀಕರಣದ ಬಗ್ಗೆ ಚರ್ಚಿಸಿದರು. ಸಚಿವರಾದ ಸಂತೋಷ್ ಲಾಡ್, ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕಮಾದು ಹಾಜರಿದ್ದರು.ನಟ ರಾಮ್ ಚರಣ್ - ಬುಚ್ಚಿ ಬಾಬು ಸನಾ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ನಿರ್ಮಾಪಕರು ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಗ್ಲಿಂಪ್ಸ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.ಇತ್ತೀಚೆಗೆ ಚಿತ್ರದ ಒಟಿಟಿ ಒಪ್ಪಂದಗಳೂ ಸಹ ಮುಕ್ತಾಯಗೊಂಡಿದ್ದು, ಒಟಿಟಿ ಹಕ್ಕುಗಳು ಸುಮಾರು 100 ಕೋಟಿ ರೂ.ಗೆ ಮಾರಾಟವಾಗಿವೆ ಎಂದು ಚಲನಚಿತ್ರೋದ್ಯಮ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದ್ರೆ, ಈ ವಿಷಯದ ಬಗ್ಗೆ ಅಧಿಕೃತ ಘೋಷಣೆ ಚಿತ್ರತಂಡದಿಂದ ಇನ್ನೂ ಹೊರಬಿದ್ದಿಲ್ಲ.ಇದನ್ನೂ ಓದಿ : ಮೈಸೂರಿನಲ್ಲಿ 1,000 ನೃತ್ಯಗಾರರೊಂದಿಗೆ ಟಾಲಿವುಡ್​ ಸ್ಟಾರ್ ರಾಮ್​​ ಚರಣ್​​​ ಜಬರ್​ದಸ್ತ್ ಡ್ಯಾನ್ಸ್​ - PEDDI

Category

🗞
News
Transcript
00:00Thank you for listening.
00:30Thank you for listening.
01:00Thank you for listening.
Be the first to comment
Add your comment

Recommended