ಮೈಸೂರು: ಒಂದೇ ತಿಂಗಳಿನಲ್ಲಿ ನಂಜನಗೂಡಿನ ನಂಜುಂಡೇಶ್ವರ 2 ಕೋಟಿ ರೂ. ಒಡೆಯನಾಗಿದ್ದಾನೆ. ದೇವಸ್ಥಾನದ ಎಲ್ಲಾ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣವನ್ನು ಅಲ್ಲಿನ ದಾಸೋಹ ಭವನದಲ್ಲಿ ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಎಣಿಕೆ ಮಾಡಿದರು. ಒಟ್ಟಾರೆ ಹುಂಡಿಯಲ್ಲಿ 2,11,49,728 ನಗದು, 58 ಗ್ರಾಂ ಚಿನ್ನ, 2 ಕೆ.ಜಿ. 500 ಗ್ರಾಂ ಬೆಳ್ಳಿ ಹಾಗೂ 46 ವಿದೇಶಿ ಕರೆನ್ಸಿಗಳು ಕೂಡ ಸಂಗ್ರಹವಾಗಿವೆ.ದೊಡ್ಡ ಜಾತ್ರೆ ಎಫೆಕ್ಟ್, ಏರಿದ ಹುಂಡಿ ಕಾಣಿಕೆ: ನಂಜನಗೂಡಿನಲ್ಲಿ 15 ದಿನಗಳ ಹಿಂದೆ ದೊಡ್ಡ ಜಾತ್ರೆ ನಡೆದಿದ್ದು, ಈ ವೇಳೆ ನಂಜುಂಡೇಶ್ವರನ ದರ್ಶನ ಪಡೆಯಲು ಲಕ್ಷಾಂತರ ಮಂದಿ ಆಗಮಿಸಿದ್ದರು. ಹೀಗಾಗಿ ದೇವಳದ ಹುಂಡಿಯಲ್ಲಿ ಆದಾಯದ ಪ್ರಮಾಣ ಹೆಚ್ಚಳವಾಗಿದೆ.ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ ತಿಂಗಳು ಹುಂಡಿ ಎಣಿಕೆ ಮಾಡುತ್ತಿದ್ದಾಗ 1 ಕೋಟಿ ರೂ.ಗಳೊಳಗೆ ಕಾಣಿಕೆ ಸೀಮಿತವಾಗಿತ್ತು. ಆದರೀಗ, 2 ಕೋಟಿ ರೂ.ಗಳನ್ನು ದಾಟಿದೆ. ಈ ಬಾರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿದ್ದರು.ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ & ಲಕ್ಕಿ ಬ್ಯಾಂಬೂ ಯಾವ ಕಡೆ ಇಡುವುದರಿಂದ ಅದೃಷ್ಟ ಲಭಿಸುತ್ತದೆ?
Comments