Skip to playerSkip to main content
  • 8 hours ago
ಹಾಸನ: ಬೇಲೂರು ತಾಲೂಕು ಅರೇಹಳಗಳಿ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದೆ.ಭಾನುವಾರ ಇಡೀ ರಾತ್ರಿ ಆಹಾರಕ್ಕಾಗಿ ಅಲೆದಾಡಿದ್ದ ಸುಮಾರು 28 ಕಾಡಾನೆಗಳ ಹಿಂಡು ಬೆಳಗ್ಗೆ ಕಾಫಿ ತೋಟದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದವು. ಈ ಸಂದರ್ಭದಲ್ಲಿ ಗೌರಿ ಕೆರೆಯಲ್ಲಿ ಸಾಕಷ್ಟು ನೀರು ಕುಡಿಯುವುದರ ಮೂಲಕ ದಾಹ ನೀಗಿಸಿಕೊಂಡು ಮತ್ತದೇ ತೋಟಕ್ಕೆ ವಿಶ್ರಾಂತಿಗೆ ತೆರಳಿದವು. ಇನ್ನೊಂದು ಒಂಟಿ ಕಾಡಾನೆಯು ಕಿತ್ತಾವರ ಎಸ್ಟೇಟ್‌ನ ಬಿ ಬ್ಲಾಕ್‌ನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.ಇಟಿಎಫ್​ ಸಿಬ್ಬಂದಿಗಳು ಕಾಡಾನೆಗಳ ಸಂಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ತಿಳಿಸುತ್ತಿದ್ದಾರೆ. ಜತೆಗೆ ಆನೆಗಳು ಓಡಾಡಬಹುದಾಗಿರುವ ಸ್ಥಳದಲ್ಲಿ ರಾತ್ರಿ ಸಂಚಾರನ್ನು ಮಾಡಬಾರದೆಂದು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.ಇದನ್ನೂ ಓದಿ: ಚಿಕ್ಕಮಗಳೂರು: ಮುತ್ತೋಡಿ ಅಭಯಾರಣ್ಯದಲ್ಲಿ ದೈತ್ಯಾಕಾರದ ದಂತದ ಆನೆ ಪ್ರತ್ಯಕ್ಷ  ಚಿಕ್ಕಮಗಳೂರು ಮುತ್ತೋಡಿ ಅಭಯಾರಣ್ಯದ ಮಧ್ಯೆ ಇರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೆಸವೆ ಬಳಿ ಇರುವ ಅರಣ್ಯ ವಿಶ್ರಾಂತಿ ಗೃಹದ ಬಳಿ ದೈತ್ಯ ದಂತದ ಕಾಡಾನೆಯೊಂದು ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಈ ಆನೆ ಕಂಡ ಜನತೆ ಅದರ ಗಾತ್ರ ನೋಡಿಯೇ ಬೆಚ್ಚಿಬಿದ್ದಿದ್ದಾರೆ.

Category

🗞
News
Transcript
00:00Let's go!
00:05We're going to get out of here.
00:18We're going to get out of here.
00:38I'm getting there to meet an answer.
00:41Huh?
00:42oh
00:43what
00:43you are
00:43this
00:43i am
00:43the
00:43the
00:43the
01:01the
01:01the
01:11There is a lot of good news.
01:13There is a lot of good news.
01:17There are many different people.
01:32Why are you going to come here?
01:38Guys, I'm going to come here.
02:09Transcription by CastingWords
Comments

Recommended