Skip to playerSkip to main content
ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಊರಿಗೆ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ…

ಈ ನಡುವೆಯೇ, ಬೆಂಗಳೂರು ನಗರದ Tin Factory Bus Stop ಬಳಿ ಆತಂಕಕಾರಿ ದೃಶ್ಯಗಳು ಕಂಡುಬಂದಿವೆ. 😳

ಖಾಸಗಿ ಬಸ್‌ಗಳು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ, ಪ್ರಯಾಣಿಕರ ಜೀವದ ಜೊತೆ ಆಟ ಆಡುತ್ತಿರುವುದು ಬೆಳಕಿಗೆ ಬಂದಿದೆ.

ಬಸ್ ಒಳಗೆ ಸೀಟುಗಳು ಭರ್ತಿಯಾದರೂ…

ಅದರ ಮೇಲೆ, ಬಸ್ ಟಾಪ್ ಮೇಲೆಯೇ ಪ್ರಯಾಣಿಕರನ್ನು ಕೂರಿಸಿ ಅಪಾಯಕಾರಿಯಾಗಿ ಸಂಚಾರ ನಡೆಸುತ್ತಿರುವುದು ಕಂಡುಬಂದಿದೆ.

ಚೆನ್ನೈ ಮತ್ತು ತಿರುಪತಿ ಕಡೆ ಹೋಗುವ ಜನರ ಸಂಖ್ಯೆ ಹೆಚ್ಚಾದ ಹಿನ್ನೆಲೆ, ಖಾಸಗಿ ಬಸ್‌ಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಸಿ ಸಾಗಿಸಲಾಗುತ್ತಿದೆ.

ಒಂದೆಡೆ ಸರ್ಕಾರದ ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ಸೀಟು ಸಿಗದೆ ಜನರು ಪರದಾಡುತ್ತಿದ್ದರೆ…

ಇನ್ನೊಂದೆಡೆ ಖಾಸಗಿ ಬಸ್‌ಗಳು ಇದನ್ನೇ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ KR Puram Traffic Police ಮತ್ತು Regional Transport Office ಅಧಿಕಾರಿಗಳು ಕಣ್ಮುಚ್ಚಿ ಕುಳಿತಾರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಜನರ ಸುರಕ್ಷತೆಗಿಂತ ಲಾಭ ಮುಖ್ಯವಾಗುತ್ತಿರುವ ಈ ಪರಿಸ್ಥಿತಿ ಎಷ್ಟು ಅಪಾಯಕರ ಎಂಬುದು ಈಗ ಚರ್ಚೆಯ ವಿಷಯವಾಗಿದೆ.#Bengaluru #KRPuram #UgadiTravel #BusOverload #ShockingNews #PublicSafety #TrafficViolation #IndiaNews #ViralNews #Transport #BreakingNews #StaySafe

Category

🗞
News
Transcript
00:00Oh

Recommended