ನಿನ್ನೆ ಸಂಜೆ ನಡೆದ ಅನಿರೀಕ್ಷಿತ ದುರ್ಘಟನೆಯಲ್ಲಿ ಸಂಕೇತ ಎಂಬ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡಿರುವುದು ಇಡೀ ಸಮಾಜದ ಮನಸ್ಸನ್ನು ಕಲಕಿದೆ. ಮಕ್ಕಳ ನಡುವಿನ ಸಣ್ಣ ಜಗಳವನ್ನು ಬಿಡಿಸಲು ಹೋದ ಅಮಾಯಕ ಬಾಲಕ, ಹೊರಗಿನ ಪುಂಡ ಹುಡುಗರ ಹಸ್ತಕ್ಷೇಪದಿಂದಾಗಿ ತನ್ನ ಪ್ರಾಣವನ್ನೇ ಅರ್ಪಿಸಬೇಕಾಯಿತು. ಈ ಘಟನೆಯಲ್ಲಿ ಯಾವುದೇ ಜಾತಿ ಅಥವಾ ಧರ್ಮದ ಷಡ್ಯಂತ್ರವಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದ್ದು, ಸಾವಿನ ಮನೆಯಲ್ಲಿ ಮುಸ್ಲಿಂ ಬಾಂಧವರು ಸೇರಿದಂತೆ ಎಲ್ಲ ಧರ್ಮದವರು "ನಮ್ಮನೆ ಹುಡುಗ" ಎಂದು ಕಣ್ಣೀರು ಹಾಕುತ್ತಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಪುಂಡಾಟಿಕೆಯಿಂದ ನಡೆದ ಈ ದುರಂತಕ್ಕೆ ಇಡೀ ಊರೇ ಒಗ್ಗಟ್ಟಾಗಿ ಶೋಕ ವ್ಯಕ್ತಪಡಿಸುತ್ತಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments