ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಿಡಿಗೇಡಿಗಳ ಹುಚ್ಚಾಟದಿಂದಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ವರದಿಯಾಗಿದೆ. ರಾತ್ರಿ ಗಣೇಶ ಮೂರ್ತಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಭಾರಿ ಜನಸ್ತೋಮ ಸೇರಿತ್ತು. ಜನರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರೂ ಕಿಡಿಗೇಡಿಗಳು ಕೇಳದ ಕಾರಣ ಲಾಠಿ ಬೀಸಬೇಕಾಯಿತು. ಕೆಲವರು ಕೆಟ್ಟ ಉದ್ದೇಶದಿಂದ ಅಲ್ಲಿ ಗುಂಪುಗೂಡಿ ಅಧಿಕಾರಿಗಳ ಮೇಲೆ ಬೀಳಲು ಪ್ರಯತ್ನಿಸಿದರು ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಮೆರವಣಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ CCTV ಮತ್ತು ಡ್ರೋನ್ ಕಣ್ಗಾವಲು ಇಡಲಾಗುವುದು ಹಾಗೂ ಪೊಲೀಸರು 24x7 ಸೇವೆ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments