ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ಪಾರ್ಟಿ 33 ದಿನಗಳಿಂದ ಧರಣಿ ನಡೆಸುತ್ತಿದ್ದು, ಸಂಸತ್ ಚಲೋ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು FIR ದಾಖಲಿಸಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಪ್ರತಿಭಟನೆ ತೀವ್ರಗೊಳಿಸಲು ಯಾರಾದರೂ ಪ್ರಾಣ ತ್ಯಾಗ ಮಾಡಬೇಕೆಂದು ರಹಸ್ಯ ಚಾಟ್ನಲ್ಲಿ ಚರ್ಚಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಸರು ಪ್ರಸ್ತಾಪ, ವಿದೇಶಿ ಫಂಡಿಂಗ್ ಶಂಕೆ, ಮತ್ತು ಸೋನಮ್ ವಾಂಗ್ಚುಕ್ ಸಂಪರ್ಕ ಕುರಿತು ತನಿಖೆ ನಡೆಯುತ್ತಿದೆ. ಫೊರೆನ್ಸಿಕ್ ಪ್ರಯೋಗಾಲಯಕ್ಕೆ ಚಾಟ್ ಇತಿಹಾಸ ಕಳುಹಿಸಲಾಗಿದ್ದು, ಪ್ರತಿಭಟನೆಯ ಹಿಂದಿನ ಸಂಚು-ಪಿತೂರಿ ಬಗ್ಗೆ ತನಿಖೆ ಮುಂದುವರಿದಿದೆ.
Comments