Skip to playerSkip to main content
  • 2 days ago
ಪುರಿ(ಒಡಿಶಾ): ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂತ್ರಸ್ತರಿಗೆ ಅಂತಾರಾಷ್ಟ್ರೀಯ ಮರಳು ಕಲಾವಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್​​​​​ ಪಟ್ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ.ಪುರಿಯ ನೀಲಾದ್ರಿ ಕಡಲತೀರದಲ್ಲಿ 6 ಅಡಿ ಎತ್ತರದ ಮರಳು ಶಿಲ್ಪವನ್ನು ರಚಿಸಿದ್ದಾರೆ. ಈ ಮರಳು ಶಿಲ್ಪ "ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಿ" ಎಂಬ ಹೃದಯಸ್ಪರ್ಶಿ ಸಂದೇಶ ಹೊಂದಿದೆ. ಈ ಮೂಲಕ, ಕಲಾವಿದ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.ಜಾಗತಿಕ ಸಹೋದರತ್ವ ಮತ್ತು ಮಾನವೀಯತೆಯ ಸಂದೇಶ ಹೊಂದಿರುವ ಈ ಮರಳು ಶಿಲ್ಪವನ್ನು ಸುದರ್ಶನ್ ಅವರು ಮರಳು ಕಲಾ ಸಂಸ್ಥೆಯ ವಿದ್ಯಾರ್ಥಿಗಳ ಸಹಾಯದಿಂದ ಸಿದ್ಧಪಡಿಸಿದ್ದಾರೆ.ಸುದರ್ಶನ್ ಪಟ್ನಾಯಕ್ ಅವರು ಮಾತನಾಡಿ, "ಇಂತಹ ಕಠಿಣ ಸಮಯದಲ್ಲಿ ವೆನೆಜುವೆಲಾದ ಜನರಿಗೆ ನನ್ನ ಪ್ರಾರ್ಥನೆಗಳು. ಈ ಮರಳು ಕಲೆಯ ಮೂಲಕ ನಾನು ದುಃಖಿತರು ಮತ್ತು ಅವರ ಕುಟುಂಬಗಳಿಗೆ ಸಹಾನುಭೂತಿ ಮತ್ತು ಬೆಂಬಲವನ್ನು ನೀಡುತ್ತಿದ್ದೇನೆ. ದೇವರು ಅವರಿಗೆ ಈ ದುಃಖ ಸಹಿಸಿಕೊಳ್ಳುವ ತಾಳ್ಮೆ ಮತ್ತು ಶಕ್ತಿ ನೀಡಲಿ" ಎಂದು ಹೇಳಿದರು. ಸುದರ್ಶನ್ ಪಟ್ನಾಯಕ್​ ಅವರು ತಮ್ಮ ಕಲೆಯ ಮೂಲಕ ಜಾಗತಿಕ ಮಾನವೀಯ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಇದರ ಜತೆಗೆ ವಿಶ್ವದಾದ್ಯಂತ 65ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಕಲಾ ಸ್ಪರ್ಧೆಗಳು ಮತ್ತು ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.ಇದನ್ನೂ ಓದಿ: ವೆನೆಜುವೆಲಾ ಭೂಕಂಪ - ಸಾವಿನ ಸಂಖ್ಯೆ 235ಕ್ಕೆ ಏರಿಕೆ: 4300ಕ್ಕೂ ಹೆಚ್ಚು ಮಂದಿಗೆ ಗಾಯ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Category

🗞
News

Recommended