Skip to playerSkip to main content
  • 24 minutes ago
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಹುತೇಕ ಭಾಗದಲ್ಲಿ ಸೋಮವಾರ ರಾತ್ರಿ ಗಾಳಿ ಸಹಿತ ಸುರಿದ ಮಳೆಗೆ ಅಡಿಕೆ, ಪಪ್ಪಾಯಿ ಸೇರಿದಂತೆ ಅಪಾರ ಪ್ರಮಾಣದ ಬೆಳೆgಳು ಹಾನಿಯಾಗಿವೆ. ಜಗಳೂರು ತಾಲೂಕಿನ ಕಸಬ ಹೋಬಳಿಯ ಬಿದರಕೆರೆ, ಕಟ್ಟಿಗೆಹಳ್ಳಿ ಸೇರಿದಂತೆ ಸುಮಾರು ಹಳ್ಳಿಗಳಲ್ಲಿ ಹಾನಿಯಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಗಾಳಿ ಸಹಿತ ಮಳೆಗೆ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಅಡಿಕೆ ಮತ್ತು ಪಪ್ಪಾಯಿ ಗಿಡಗಳು ಧರೆಗುರುಳಿವೆ.10ಕ್ಕೂ ಹೆಚ್ಚು ರೈತರ ಅಡಿಕೆ ಮತ್ತು ಪಪ್ಪಾಯಿ ತೋಟಗಳಿಗೆ ಹಾನಿಯಾಗಿದೆ. ಕಟ್ಟಿಗೆಹಳ್ಳಿಯ ಕರಿಬಸಪ್ಪ, ಬಸವ ಪ್ರಭು, ಕಲ್ಲೇಶ್ ಪೂಜಾರ್, ಚನ್ನಪ್ಪ, ಯಶೋಧಮ್ಮ ರಘು ಎಂಬುವರಿಗೆ ಸೇರಿದ ತೋಟಗಳಿಗೆ ಹಾನಿಯಾಗಿದೆ. ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ. ಅದೇ ರೀತಿಯಲ್ಲಿ ಪರಿಹಾರ ಸಿಗದೆ ಇದ್ದರೆ ನಮ್ಮ ಬದುಕು ಮತ್ತು ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರಿಯಾದ ಪರಿಹಾರ ಕಟ್ಟಿಕೊಡುವಂತೆ ರೈತರು ಸರ್ಕಾರದ ಕದ ತಟ್ಟಿದ್ದಾರೆ.  ರೈತ ಕರಿಬಸಪ್ಪ ಮಾತನಾಡಿ, 'ಕಟ್ಟಿಗೆಹಳ್ಳಿ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ರಾತ್ರಿ ಸುರಿದ ಮಳೆಯಿಂದ ಅಡಿಕೆ, ಪಪ್ಪಾಯ ಗಿಡಗಳು ಬಿದ್ದಿವೆ. ಬೆಳೆ ಹಾನಿಯಾಗಿದ್ದರಿಂದ ಮನಸ್ಸಿಗೆ ಬಹಳ ಬೇಸರ ತರಿಸಿದೆ. ನಮಗೆ ಆಗಿರುವ ನಷ್ಟವನ್ನು ಸರಿದೂಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಹಾರ ಕೊಡಬೇಕು. ಸಿಡಿಲಿಗೆ ಹಾಗೂ ಗಾಳಿ ಮಳೆಗೆ 40ಕ್ಕೂ ಹೆಚ್ಚು ಗಿಡಗಳು ಬಿದ್ದಿವೆ' ಎಂದು ತಿಳಿಸಿದರು.ಇದನ್ನೂ ಓದಿ : ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ, ಜನ ಸಂಪರ್ಕ ಕಡಿತ

Category

🗞
News
Transcript
00:28Oh
00:59Thank you for joining us.
01:17Thank you very much.
01:31Thank you very much.
Comments

Recommended