ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ WHO ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದು, ಭಾರತ ಸರ್ಕಾರ ರಾಜ್ಯಗಳಿಗೆ ಕ್ವಾರಂಟೈನ್ ಮತ್ತು ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದೆ. ಕೋವಿಡ್ಗಿಂತಲೂ ಅಪಾಯಕಾರಿ ಎನಿಸಿರುವ ಎಬೋಲಾ ವೈರಸ್ ಕಣ್ಣು, ಮೂಗು, ಬಾಯಿಂದ ರಕ್ತಸ್ರಾವ ಉಂಟುಮಾಡುತ್ತದೆ. ವೈಜ್ಞಾನಿಕ ತಜ್ಞರ ಪ್ರಕಾರ ಇದು ಗಾಳಿಯಲ್ಲಿ ಹರಡುವುದಿಲ್ಲ, ಆದರೆ ನೇರ ಸಂಪರ್ಕದಿಂದ ಹರಡುತ್ತದೆ. ಆರು ತಳಿಗಳಲ್ಲಿ ಒಂದಕ್ಕೆ ಮಾತ್ರ ಲಸಿಕೆ ಲಭ್ಯ. ಸಿಂಗಾಪೂರದಲ್ಲಿ ಕೋರೋನಾ ಪ್ರಕರಣಗಳೂ ಹೆಚ್ಚಾಗಿವೆ. ಹೈ-ರಿಸ್ಕ್ ದೇಶಗಳಿಗೆ ಪ್ರಯಾಣ ಬೇಡ ಎಂದು ಎಚ್ಚರಿಕೆ ನೀಡಲಾಗಿದೆ.
Comments