Skip to playerSkip to main content
  • 3 hours ago
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಒಂದು ವರ್ಷ ತುಂಬಿದೆ. 2025ರ ಏಪ್ರಿಲ್ 22ರಂದು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ 25 ಮಂದಿ ಮೃತಪಟ್ಟರು, 20 ಮಂದಿ ಗಾಯಗೊಂಡರು. ಕರ್ನಾಟಕದ ಪ್ರವಾಸಿಗರೂ ಸೇರಿದ್ದರು. ಉಗ್ರರು ಕಲ್ಮಾ ಓದಲು ಹೇಳಿ, ಕುರಾನ್ ಸಾಲುಗಳನ್ನು ಓದಲು ಸಾಧ್ಯವೇ ಎಂದು ಪರೀಕ್ಷಿಸಿ ಗುಂಡು ಹಾರಿಸಿದರು. ಈ ಘಟನೆಯ ವಿಡಿಯೋಗಳು ಸಾಕ್ಷ್ಯ ನೀಡಿದ್ದು, ಇಡೀ ಜಗತ್ತಿನಲ್ಲಿ ಆಕ್ರೋಶ ವ್ಯಕ್ತವಾಯಿತು. ಭಾರತ ಆಪರೇಶನ್ ಸಿಂಧೂರ್ ಮೂಲಕ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ಪ್ರತೀಕಾರ ತೆಗೆದುಕೊಂಡಿತು. ಪಾಕಿಸ್ತಾನ ಪ್ರತಿರೋಧ ಒಡ್ಡಿದಾಗ ಭಾರತ ಮಿಲಿಟರಿ ಕ್ರಮ ಕೈಗೊಂಡಿತು. ತಮ್ಮವರನ್ನು ಕಳೆದುಕೊಂಡ 25 ಕುಟುಂಬಗಳಲ್ಲಿ ಇಂದಿಗೂ ಶೋಕ ಮನೆ ಮಾಡಿದೆ.

Category

🗞
News
Comments

Recommended